ಹೆಜಮಾಡಿ : ಗ್ರಾಮ ಪಂಚಾಯತ್ ವ್ಯಾಪ್ತಿಯ 5ನೇ ವಾರ್ಡ್ ಬ್ರಹ್ಮಸ್ಥಾನದ ದ್ವಾರದ ಬಳಿ ಸುಮಾರು ೫ ಎಕರೆ ಬಯಲು ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗಲಿ ಸ್ಥಳೀಯರು , ಯುಪಿಸಿಎಲ್ ಅಗ್ನಿಶಾಮಕ ದಳದಿಂದ ಸಕಾಲಿಕ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಲಾಯಿತು.
ಪಕ್ಕದಲ್ಲಿ ಯಾವುದೇ ಮನೆ ಇಲ್ಲದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ.
ಈ ಸಂದರ್ಭದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಶರಣ್ ಕುಮಾರ್ ಮಟ್ಟು, ಸಾಮಾಜಿಕ ಕಾರ್ಯಕರ್ತರಾದ ನಿತಿನ್ ಕುಮಾರ್ ಹೆಜಮಾಡಿ ಕೋಡಿ, ಅನಿಲ್ ಎಚ್ ಕುಂದರ್, ಕೃಷ್ಣರಾಜ ಭಟ್, ನವೀನ್ ಕುಮಾರ್, ಅಗ್ನಿ ಶಾಮಕ ದಳದ ಉಪ ಅಧಿಕಾರಿ ಶರಣ್ ಕುಮಾರ್ ಮಟ್ಟು, ಸಿಬ್ಬಂದಿಗಳಾದ ಶರಣಪ್ಪ ಮಾದಾರ್, ಲತೇಶ್ ಕರ್ಕೆರ, ಜೋಯಲ್ ಪ್ರಮೋದ್, ಗೌರವ್ ಪಾಂಡೆ ಮತ್ತು ಸ್ಥಳೀಯ ನಾಗರಿಕರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ.