ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡದ ಸ್ಥಾಪಕಾಧ್ಯಕ್ಷರು ಆದ ಡಾ.ಕೀರ್ತಿ ಪಾಲನ್ ಅವರು ಬಿದಿರಿನ ಗೂಡುದೀಪವನ್ನು ಮಾಡಿ ಪರಿಸರ ಸ್ನೇಹಕ್ಕೆ ಮಾದರಿಯ ದೀಪಾವಳಿಯನ್ನು ಆಚರಿಸಲು ಮುಂದಾಗಿದ್ದಾರೆ. ಕೇವಲ 250 ರೂಪಾಯಿ ಖರ್ಚು ಮಾಡಿ ತಯಾರಿಸಬಹುದಾದ ಈ ಬಿದಿರಿನ ಗೂಡುದೀಪವು ಮುಂದೆ ದೀಪಾವಳಿಯ ನಂತರ ಬಿದಿರಿನ ಬುಟ್ಟಿಯನ್ನು ಮನೆಯಲ್ಲಿ ಮರುಬಳಕೆ ಮಾಡಬಹುದಾಗಿದೆ, ಹಾಗೂ ನಶಿಸುತ್ತಿರುವ ಬಿದಿರಿನ ಬುಟ್ಟಿ ತಯಾರಿಕರಿಗೆ ಇದರಿಂದ ಪ್ರಯೋಜನ ಸಿಗಲಿದೆ.