ದಿನಾಂಕ:15.11.2020 ರವಿವಾರ ಇಂದು ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಕಟಪಾಡಿಯ "ಕಾರುಣ್ಯ" ವೃದ್ಧಾಶ್ರಮಕ್ಕೆ ಭೇಟಿನೀಡಿ ದೀಪಾವಳಿಯನ್ನು ಆಚರಿಸಲಾಯಿತು. ನಿಂಬೆಹಣ್ಣಿನ ಸಿಪ್ಪೆ ಹಾಗೂ ತೆಂಗಿನಕಾಯಿಯ ಗೆರಟೆಯಿಂದ ಮಾಡಿದ ಹಣತೆಯಿಂದ ದೀಪ ಹಚ್ಚಿ ದೀಪಾವಳಿಯನ್ನು ಅಲ್ಲಿಯ ವೃದ್ಧರೊಂದಿಗೆ ಆಚರಿಸಲಾಯಿತು. ತಂಡದ ಸ್ಥಾಪಕಾಧ್ಯಕ್ಷರು ಆದ ಡಾ.ಕೀರ್ತಿ ಪಾಲನ್ ಈ ಕಾರ್ಯಕ್ರಮವನ್ನು ನೆರವೇರಿಸಿದರು. ಬೇಬಿ ಶೆಟ್ಟಿ, ಮೋಕ್ಷ ಪಾಲನ್ ಹಾಗೂ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು. ಮೋಕ್ಷ ಪಾಲನ್ ಸಿಹಿತಿಂಡಿ ಹಂಚಿ ಧನ್ಯವಾದ ಸಲ್ಲಿಸಿದರು.