ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಿರುವೆರ್ ಕುಡ್ಲ ಸಂಘಟನೆಯ ನೂತನ ಪಲಿಮಾರು ಘಟಕದ ಅಧ್ಯಕ್ಷರಾಗಿ ಪ್ರಸಾದ್ ಪೂಜಾರಿ ಪಲಿಮಾರು ಆಯ್ಕೆ

Posted On: 18-11-2020 10:33PM

ಪಡುಬಿದ್ರಿ : ಸಮಾಜ ಸೇವೆಯಲ್ಲಿ ತೊಡಗಿರುವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬಿರುವೆರ್ ಕುಡ್ಲ ಸಂಘಟನೆಯ ನೂತನ ಪಲಿಮಾರು ಘಟಕದ ಅಧ್ಯಕ್ಷರನ್ನಾಗಿ ಪ್ರಸಾದ್ ಪೂಜಾರಿ ಪಲಿಮಾರು ಇವರನ್ನುಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ಶ್ರೀ ಮೂಕಾಂಬಿಕಾ ದೇವಸ್ಥಾನದ ಸಭಾಭವನ, ಅವರಾಲು ಮಟ್ಟುವಿನಲ್ಲಿ ಬಿರುವೆರ್ ಕುಡ್ಲದ ಕೇಂದ್ರ ಸಮಿತಿಯ ಸಂಘಟನಾ ಅಧ್ಯಕ್ಷರಾದ ಚಂದ್ರಶೇಖರ್ ಎಂ. ಅಮೀನ್ ಇವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಕಿಶೋರ್ ಅವರಾಲು, ದಾಮೋದರ್ ಕೋಟ್ಯಾನ್ ಅಡ್ವೆ. ಪ್ರದಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಡ್ವೆ ಗರಡಿಮನೆ, ಕಾರ್ಯದರ್ಶಿ ಪ್ರತಾಪ್ ಸುವರ್ಣ, ಅವರಾಲು, ಗೌರವ ಸಲಹೆಗಾರರಾಗಿ ಸುರೇಶ್ ಪೂಜಾರಿ, ನಾರಾಯಣ ಪೂಜಾರಿ. ಸಲಹೆಗಾರರಾಗಿ ರಾಮದಾಸ್ ಅವರಾಲು, ಯೋಗೇಶ್ ಪೂಜಾರಿ ಅವರಾಲು. ಸಂಘಟನಾ ಕಾರ್ಯದರ್ಶಿ ಹರೀಶ್ ಪೂಜಾರಿ ಅವರಾಲು. ಕೋಶಾಧಿಕಾರಿ ತಾರಾನಾಥ ಕೋಟ್ಯಾನ್. ಜೊತೆ ಕೋಶಾಧಿಕಾರಿ ಸಂದೀಪ್ ಸಾಲಿಯಾನ್. ಸಾಮಾಜಿಕ ಜಾಲತಾಣ ಉಸ್ತುವಾರಿ ಪ್ರಶಾಂತ್ ಪೂಜಾರಿ ಅವರಾಲು, ನಿಶಾನ್ ಸಾಲಿಯಾನ್ ಅವರಾಲು, ಸಂದೀಪ್ ಅಡ್ವೆ ಗರಡಿಮನೆ ಅವರನ್ನು ಆಯ್ಕೆ‌ ಮಾಡಲಾಗಿದೆ.