ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ತಂಡದ ವತಿಯಿಂದ ಸಂತೆಕಟ್ಟೆಯ ಸ್ವರ್ಣ ನದಿಯ ಸೇತುವೆಯ ಇಕ್ಕೆಲಗಳಲ್ಲಿ ಪ್ರಜ್ಞಾವಂತ ನಾಗರೀಕರು ಎಸೆದ ಕಸ ಕಶ್ಮಲ ಗಳನ್ನೂ ಒಟ್ಟು ಮಾಡಿ ಸ್ವರ್ಣೆಯ ನ್ನು ಶುದ್ದೀಕರಿಸುವ ಕಾರ್ಯಕ್ರಮ ನ.29 ಆದಿತ್ಯವಾರ ನಡೆಯಿತು.
ಪ್ಲಾಸ್ಟಿಕ್ ತ್ಯಾಜ್ಯ ಹಾಗು ಇತರ ಕಶ್ಮಲ ಗಳನ್ನೂ ಸಂಗ್ರಹಿಸಿಪ್ಲಾಸ್ಟಿಕ್, ಸೀಸ,ಬಟ್ಟೆ ಇತ್ಯಾದಿ ಗಳನ್ನೂ ವಿಭಾಗಿಸಲಾಯಿತು.ಈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಸೆದ ಕಸಗಳು ನದಿಗೆ ಸೇರಿ ಎಲ್ಲರಿಗೂ ತೊಂದರೆಯಾಗಿತ್ತು. ಈ ಭಾಗದಲ್ಲಿ ಕೋಳಿ ತ್ಯಾಜ್ಯ ಸೇರಿದಂತೆ ಕಸವನ್ನು ನದಿಗೆ ಎಸೆಯಲಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಈ ಕಾಯ೯ಕ್ರಮದಲ್ಲಿ ತಂಡದ ಪ್ರಮುಖರಾದ ಡಾ|| ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಶಶಿ, ಸವಿತಾ ಶೆಟ್ಟಿ, ಸುಜಯಾ ಶೆಟ್ಟಿ, ನಗರಸಭಾ ಸದಸ್ಯೆ ಇಂದಿರಾ ರಮೇಶ್, ರಾಘವೇಂದ್ರ ಪ್ರಭು ಕವಾ೯ಲು ಪಂಚಾಯತ್ ಪಿ.ಡಿ.ಒ ಸತೀಶ್ ನಾಯ್ಕ, ಸ್ಥಳೀಯರು ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.