ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುತ್ಯಾರು : ಕೊನೆಗೂ ರಸ್ತೆ ಹೊಂಡಕ್ಕೆ ಸಿಕ್ಕಿತು ಮುಕ್ತಿ

Posted On: 11-12-2020 01:41PM

ಮುದರಂಗಡಿ- ಶಿರ್ವ ಮುಖ್ಯರಸ್ತೆಯ ಕುತ್ಯಾರು ಬ್ಯಾಂಕ್ ಆಫ್ ಬರೋಡ ಬಳಿ ಪೈಪ್ ಅಳವಡಿಸಲು ಅಗೆಯಲಾಗಿದ್ದ ರಸ್ತೆಯನ್ನು ಇಲಾಖೆ ಗುರುವಾರ ಸರಿಪಡಿಸಿ ಡಾಮರೀಕರಣಗೊಳಿಸಿದೆ.

ತಿರುವಿನ ರಸ್ತೆಯಲ್ಲಿ ಹೊಂಡ ಉಂಟಾಗಿ ತಿಂಗಳುಗಳೇ ಕಳೆದು ಸಣ್ಣಪುಟ್ಟ ಅಪಘಾತಗಳಾಗಿ ಜೊತೆಗೆ ಡಾಮರೀಕರಣಕ್ಕಾಗಿ ಜಲ್ಲಿ ಹಾಕಲಾಗಿದ್ದು ಪರಿಸರವಿಡೀ ಧೂಳುಮಯವಾಗಿತ್ತು.

ಇದೀಗ ಈ ರಸ್ತೆಯನ್ನು ಸರಿಪಡಿಸಿದ್ದು ಸ್ಥಳೀಯರು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ತಕ್ಷಣ ಸ್ಪಂದಿಸಿದ ಅಧಿಕಾರಿವರ್ಗ, ಗುತ್ತಿಗೆದಾರರಿಗೆ ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್ ಹಾಗೂ ಕುತ್ಯಾರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂಪತ್ ಕುಮಾರ್ ಕೇಂಜ ಸಾರ್ವಜನಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.