ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕೆ.ಎಲ್.ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ ಪುಸ್ತಕ ಬಿಡುಗಡೆ

Posted On: 21-12-2020 12:11PM

ಉಚ್ಚಿಲ : ಯಕ್ಷಗಾನ ಗುರು ,ನಿವೃತ್ತ ಶಿಕ್ಷಕ ಎರ್ಮಾಳು ವಾಸುದೇವ ರಾಯರು ಉಚ್ಚಿಲದ ಹೋಟೆಲ್ ರಾಧಾದ ರಾಧಾ ಸಭಾಭವನದಲ್ಲಿ ಕೆ.ಎಲ್. ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ ಪುಸ್ತಕವನ್ನು ಬಿಡುಗಡೆ ಗೊಳಿಸಿ ಶುಭಹಾರೈಸಿದರು .ನಿರಂತರ ಅಭ್ಯಾಸ , ಅಧ್ಯಯನ , ಓದು,ಸಾಧನೆ ಇವು ಯಕ್ಷಗಾನ ಕಲಾವಿದನಾಗ ಬೇಕಾದವರಿಗೆ ಅಗತ್ಯ ಎಂದು ವಾಸುದೇವರಾಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ .ಎಸ್. ಅವರು ವಹಿಸಿದ್ದರು ‌. ಎಲ್ಲೂರುಗುತ್ತು ವೈ.ಪ್ರಫುಲ್ಲ ಶೆಟ್ಟಿ, ಪುಣೆ ಉದ್ಯಮಿ ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ, ಅದಮಾರು ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ. ಶೆಟ್ಟಿ‌ , ಎಲ್ಲೂರಿನ ಪಂಚಾಕ್ಷರೀ ಯಕ್ಷಗಾನ ಮಂಡಳಿಯ ಸಂಸ್ಥಾಪಕ ಶ್ರೀನಿವಾಸ ಉಪಾಧ್ಯಾಯ , ಕುಂಜೂರಿನ ಕೃಷಿಕ ಗುರುರಾಜ ಮಂಜಿತ್ತಾಯ ಉಪಸ್ಥಿತರಿದ್ದರು .

ಈ ಸಂದರ್ಭದಲ್ಲಿ ಯಕ್ಷಗಾನ ಗುರು ಎರ್ಮಾಳು ವಾಸುದೇವರಾಯರಿಗೆ ಗುರು ವಂದನೆ ಸಮರ್ಪಿಸಲಾಯಿತು . ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರನ್ನು ಗೌರವಿಸಲಾಯಿತು . ಗಣೇಶ ರಾವ್ ಎಲ್ಲೂರು ಸ್ವಾಗತಿಸಿ - ಪುಸ್ತಕ ಪರಿಚಯಿಸಿದರು ,ಸ್ನೇಹಾ ಎಸ್.ಕೆ. ಮತ್ತು ಸನ್ನಿಧಿಯವರ ಪ್ರಾರ್ಥನೆ ಯೊಂದಿಗೆ, ಗಣೇಶ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ, ನಾಗರಾಜ ಉಡುಪ ವಂದಿಸಿದರು.