ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಡ್ಯಾರ್ ಪದವಿನ ಸುರೇಶ್ ಹಾಗೂ ಅಂಬಿಕಾ ದಂಪತಿಯ 4 ವರ್ಷದ ಪುಟ್ಟ ಕಂದ ದರ್ಶನ್ ನ ಚಿಕಿತ್ಸೆಗೆ ಸರಿಸುಮಾರು ಹದಿನೈದು ಲಕ್ಷ ರೂಪಾಯಿಯ ಅಗತ್ಯವಿದ್ದು ದಂಪತಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದು.
ಸಂತ್ರಸ್ತರ ಅಳಲನ್ನು ಮನಗಂಡು ಮಹಾಗಣಪತಿ ಸೇವಾ ಟ್ರಸ್ಟ್ ನ ಸದಸ್ಯರು ಶಿಬರೂರು ಜಾತ್ರೆಯಲ್ಲಿ ಉರಿ ಬಿಸಿಲಿನ ಬೇಗೆಯ ನಡುವೆಯೂ ಮಹಿಷಾಸುರನ ವೇಷಧರಿಸಿ ದಾನಿಗಳಿಂದ ಸಹಾಯಹಸ್ತವನ್ನು ಚಾಚಿದರು. ಇವರ ಈ ಸೇವಾ ಕಾರ್ಯ ಇತರರಿಗೂ ಮಾದರಿ.