ಸರಕಾರದ ಸವಲತ್ತುಗಳನ್ನು ಪಡೆಯುವ ಉದ್ದೇಶವನ್ನು ಹೊತ್ತು ಕರ್ನಾಟಕ ರಾಜ್ಯ ಕಾರ್ಮಿಕರ ಸಂಘ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಹೋಟೆಲ್ ಕಾರ್ಮಿಕರ ಸಮಾವೇಶ ಇದೇ ಬರುವ 19ರಂದು ಬೆಳಿಗ್ಗೆ 11ಕ್ಕೆ ಅಮೃತ್ ಕನ್ವೆನ್ಷನ್ ಸೆಂಟರ್ ಮಾರಣಕಟ್ಟೆ, ಚಿತ್ತೂರು ಇಲ್ಲಿ ನಡೆಯಲಿದೆ.
ಅತಿಥಿಗಳಾಗಿ ಅಮೃತ್ ಕನ್ವೆನ್ಷನ್ ಸೆಂಟರ್ ನ ಪ್ರದೀಪ್ ಶೆಟ್ಟಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾ ಸಭಾಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿ, ಕುಂದಾಪುರ ತಾಲೂಕು ಎಂಎಲ್ಎ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕರಾದ ಸುಕುಮಾರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ವಕೀಲರಾದ ಜಯಚಂದ್ರ ಶೆಟ್ಟಿ, ಹೈದರಾಬಾದ್ ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜರ್ ಮಾರಣಕಟ್ಟೆ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಕಿರಣ್ ಹೆಗ್ಡೆ ಅಂಪಾರು ಭಾಗವಹಿಸಲಿದ್ದಾರೆ.