ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸಹಸ್ರ ಪೂರ್ಣ ಚಂದ್ರ ದರ್ಶನ ಹಾಗೂ ಕನಕಾಭಿಷೇಕ ಧಾರ್ಮಿಕ ಕಾರ್ಯಕ್ರಮದಲ್ಲಿ ಗಿಡಗಳ ವಿತರಣೆ

Posted On: 18-01-2021 06:32PM

ಪಡುಬಿದ್ರಿ : ಇಲ್ಲಿಯ ಗಂಗೂ ಹೊಸಮನೆಯ ಪಿ.ಎಚ್.ಪಾರ್ಥಸಾರಥಿ - ಶ್ರೀಮತಿ ಶಾಂತಾ ಪಾರ್ಥಸಾರಥಿ ಅವರು ತಮ್ಮ 'ಸಹಸ್ರ ಪೂರ್ಣ ಚಂದ್ರ ದರ್ಶನ ಹಾಗೂ ಕನಕಾಭಿಷೇಕ' ಧಾರ್ಮಿಕ ಕಾರ್ಯಕ್ರಮದಲ್ಲಿ ಮುನ್ನೂರು ವಿವಿಧ ಜಾತಿಯ ಗಿಡಗಳನ್ನು ವಿತರಿಸಿ ತಮ್ಮ ಪರಿಸರ ಪ್ರೀತಿಯನ್ನು ಮೆರೆದರು.

ಭಾರತೀಯ ಕಿಸಾನ್ ಸಂಘದ ಪಡುಬಿದ್ರಿ ವಿಭಾಗದ ಮಾಜಿ ಅಧ್ಯಕ್ಷರಾಗಿದ್ದ ಪಾರ್ಥಸಾರಥಿಯವರು ಕಿಸಾನ್ ಸಹಜ ಪರಿಸರ ರಕ್ಷಣೆ - ಪರಿಸರ ಬೆಳವಣಿಗೆಯ ಕಾಳಜಿವುಳ್ಳವರಾಗಿದ್ದು ಬಂಧು ಬಾಂಧವರು ,ಅಭಿಮಾನಿಗಳು ,ಸಮಾಜದ ಗಣ್ಯರು ಭಾಗವಹಿಸುವ ಈ ಸಂದರ್ಭವನ್ನು ಸಸಿಗಳ ವಿತರಣೆಗೆ ಬಳಸಿಕೊಂಡಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ ಅಭಿಯಾನದ ಅಳವಡಿಕೆಯ ಸಾಧ್ಯತೆಯನ್ನು ಸ್ವತಃ ಕಾರ್ಯಗತಗೊಳಿಸಿ ಕಿರಿಯರಿಗೆ ಮಾದರಿಯಾದರು.

ವೇ.ಮೂ. ಶ್ರೀನಿವಾಸ ಭಟ್ ಅವರಿಗೆ ಮೊದಲು ಪಾರಿಜಾತ ಹೂವಿನ ಗಿಡವನ್ನು ವಿತರಿಸಿ ಗಿಡಗಳನ್ನು ವಿತರಿಸುವ ಪ್ರಕ್ರಿಯೆಆರಂಭಿಸಲಾಯಿತು .ಭಾರತ ಕಿಸಾನ್ ಸಂಘದ ಮಾಜಿ ಕಾರ್ಯದರ್ಶಿ ಸದಾಶಿವ ಆಚಾರ್ಯ ಅವರು ಉಪಸ್ಥಿತರಿದ್ದರು.ವಿಘ್ನೇಶ ಕುಮಾರ್ ,ಸಂಪತ್ ಕುಮಾರ್, ಮತ್ತು ಗಣೇಶ ಐತಾಳ್ ಕಾರ್ಯಕ್ರಮ ಸಂಯೋಜಿಸಿದ್ದರು.