ಕಾಪು ದೀಪಸ್ತಂಭ 5 ತಿಂಗಳ ಹಿಂದೆ ಹಾನಿಯಾದ ಮೆಟ್ಟಿಲು, ಗೋಡೆ ಇನ್ನೂ ದುರಸ್ತಿಯಾಗಿಲ್ಲ ಪ್ರವಾಸೋದ್ಯಮ ಇಲಾಖೆಯ ಜಾಣ ಮೌನ
Posted On:
28-01-2021 12:36PM
ಉಡುಪಿ ಜಿಲ್ಲೆಯ ಕಾಪು ಕಡಲ ಕಿನಾರೆಯಲ್ಲಿರುವ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲ್ಪಟ್ಟ ಕಾಪು ದೀಪಸ್ತಂಭ ವೀಕ್ಷಿಸಲು ದಿನನಿತ್ಯ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
ಇಂತಹ ಸಂದರ್ಭದಲ್ಲಿ ಇತ್ತೀಚಿನ ಮಳೆಯ ಸಂದರ್ಭ ದೀಪಸ್ತಂಭದ ಆರಂಭದ ಮೆಟ್ಟಿಲುಗಳು ಮತ್ತು ಗೋಡೆ ಹಾನಿಗೊಂಡಿದೆ. 5 ತಿಂಗಳಿಂದ ಈ ರೀತಿಯ ಅವಸ್ಥೆ ಇದ್ದರೂ ಈವರೆಗೂ ದುರಸ್ತಿ ಕಂಡಿಲ್ಲ.
ಈ ಬಗ್ಗೆ ಕೆಳ ತಿಂಗಳ ಹಿಂದೆ ಪತ್ರಿಕೆಯಲ್ಲಿ ವರದಿ ಪ್ರಕಟವಾದರೂ ಇನ್ನೂ ಎಚ್ಚೆತ್ತು ಕೊಳ್ಳದ ಪ್ರವಾಸೋದ್ಯಮ ಇಲಾಖೆ ಸುಂದರ ಪ್ರವಾಸಿ ತಾಣವಾದ ಈ ಸ್ಥಳದ ಇಂತಹ ಸ್ಥಿತಿಯನ್ನು ಈವರೆಗೂ ಗಮನಿಸದಂತಿದ್ದು, ಆದಷ್ಟು ಬೇಗ ಸರಿಪಡಿಸಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.