ಮೇರಮಜಲು ಗ್ರಾಮದಲ್ಲಿ ಜೆ.ಜೆ.ಎಂ ಕಾರ್ಯಚಟುವಟಿಕೆ
Posted On:
06-02-2021 11:13PM
ಬಂಟ್ವಾಳ ತಾಲೂಕಿನ ಮೇರಮಜಲು ಗ್ರಾಮ ಪಂಚಾಯತ್ ನಲ್ಲಿ ಶನಿವಾರದಂದು ಜೀವನ್ ಮಿಷನ್ ಕಾರ್ಯಚಟುವಟಿಕೆಯಾದ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಚಟುವಟಿಕೆಯನ್ನು ದ.ಕ ಜಿಲ್ಲಾ ಪಂಚಾಯತ್ , ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸಮುದಾಯ ಸಂಸ್ಥೆ ತುಮಕೂರು ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೇರಮಜಲು ಪಂಚಾಯತ್ ನಲ್ಲಿ ಜಲ ಜೀವನ್ ಮಿಷನ್ ನ ಉದ್ದೇಶ, ಗ್ರಾಮದಲ್ಲಿ ಈ ಯೋಜನೆಯ ಅನುಷ್ಠಾನ ಅಂತರ್ಜಲ ಪುನಶ್ಚೇತನ ಹಾಗೂ ಜಲಮೂಲಗಳ ಸಂರಕ್ಷಣೆ ಕುರಿತು ಜನಜೀವನ್ ಮಿಷನ್ ನ ಜಿಲ್ಲಾ ಯೋಜನಾ ಅಧಿಕಾರಿ ಪ್ರಸಾದ್ ರವರು ತಿಳಿಸಲಾಯಿತು. ದ.ಕ. ಜಿಲ್ಲಾ ಐಇಸಿ ಹೆಚ್ಆರ್ ಡಿ ವಿಭಾಗದ ಮುಖ್ಯಸ್ಥರಾದ ಶಿವರಾಮ್ ಪಿ ಬಿ ಜಲ ಜೀವನ ಮಿಷನ್ ಗ್ರಾಮೀಣ ಸಹಭಾಗಿತ್ವ ಸಮೀಕ್ಷೆ ಚಟುವಟಿಕೆಯನ್ನು ನಿರ್ವಹಿಸಿದರು.
ಸಮುದಾಯ ಸಹಭಾಗಿತ್ವದ ಮಹತ್ವದೊಂದಿಗೆ ವಂತಿಗೆ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಮೇರಮಜಲು ಗ್ರಾಮ ಪಂಚಾಯತ್ ನ ಎರಡು ಗ್ರಾಮಗಳಾದ ಕೊಡ್ಮನು ಹಾಗೂ ಮೇರಮಜಲು ಗ್ರಾಮದ ನಕ್ಷೆ ಬಿಡಿಸಿ ಪ್ರಸುತ್ತ ಮತ್ತು ನೂತನ ಕುಡಿಯುವ ನೀರಿನ ಯೋಜನಾ ಅನುಷ್ಠನಾದ ಬಗ್ಗೆ ವಿವರಿಸಿದರು.ಚರಣ್ ರಾಜ್ ಹಾಗೂ ಮಹಂತೇಶ್ ಕಾರ್ಯಕ್ರಮ ಸಂಯೋಜಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮೀ ಆರ್.ಕಿಲ್ಲೆ ಕಾರ್ಯಕ್ರಮ ನಿರೂಪಿಸಿದರು. ನೂತನವಾಗಿ ಆಯ್ಕೆಯಾದ ಪಂಚಾತ್ ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಅಂಗನವಾಡಿ,ಇಲಾಖಾ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.