ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮುದರಂಗಡಿ : ಬಿಲ್ಲವ ಸಂಘದ 8ನೇ ವರ್ಷದ ವರ್ಧಂತ್ಯುತ್ಸವ , ಪ್ರಭಾವಳಿ ಸಮರ್ಪಣೆ

Posted On: 09-02-2021 05:17PM

ಕಾಪು ತಾಲೂಕಿನ ಮುದರಂಗಡಿ ಬಿಲ್ಲವ ಸಂಘದ 8ನೇ ವರ್ಷದ ವರ್ಧಂತ್ಯುತ್ಸವ , ಪ್ರಭಾವಳಿ ಸಮರ್ಪಣೆಯು ಫೆಬ್ರವರಿ 20, ಶನಿವಾರದಂದು ನಡೆಯಲಿದೆ.

ಬೆಳಿಗ್ಗೆ 9:30ಕ್ಕೆ ಪ್ರಭಾವಳಿಯನ್ನು ಮುದರಂಗಡಿ ಅಶ್ವತ್ಥ ಕಟ್ಟೆಯಿಂದ ಶೋಭಾಯಾತ್ರೆಯ ಮೂಲಕ ನಾರಾಯಣಗುರುಗಳ ಮಂದಿರಕ್ಕೆ ತರಲಾಗುವುದು.

ಬೆಳಿಗ್ಗೆ 11 ರಿಂದ ಸಭಾ ಕಾರ್ಯಕ್ರಮ, 12:30ಕ್ಕೆ ಮಹಾಪೂಜೆ ಹಾಗೂ ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.