ಉಡುಪಿ : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬ್ರಹ್ಮಾವರದ ಮಠಪಾಡಿಯ ಆಶಕ್ತ ಕಾರ್ಮಿಕ ಮಕ್ಕಳ ವಸತಿ ಗೃಹ ವಿಜಯ ಬಾಲನಿಕೇತನಕ್ಕೆ ಭೇಟಿ ನೀಡಿ ಅವರ ಬೇಡಿಕೆಯ ಅವಶ್ಯ ತರಕಾರಿ ಸಾಮಗ್ರಿ ವಿತರಿಸಲಾಯಿತು.
ಆಸರೆ ತಂಡದ ಅಧ್ಯಕ್ಷರಾದ ಡಾ. ಕೀರ್ತಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಂಡದ ಜಗದೀಶ್ ಬಂಟಕಲ್, ಮೋಕ್ಷ, ಶ್ಲೋಕ ಪಾಲ್ಗೊಂಡಿದ್ದರು. ಅಲ್ಲಿಯ ವ್ಯವಸ್ಥಾಪಕರು ಆದಂತಕ ಜಯರಾಮ್ ನೈರಿ ಅವರು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಸ್ಥೆಗಳಿಗೆ ನಿಮ್ಮ ಆಸರೆ ಆಗಲಿ ಎಂದು ಹಾರೈಸಿದರು.