ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎಲ್ಲೂರುದ ಉಲ್ಲಾಯೆ ತುಳು ಭಕ್ತಿಗೀತೆಯ ಸಿಡಿ ಬಿಡುಗಡೆ

Posted On: 23-02-2021 08:24PM

ಕಾಪು : ಕುಂಜೂರಿನ ಮೋಕೆದ ಕಲಾವಿದರು ಸಿದ್ಧಗೊಳಿಸಿದ ಎಲ್ಲೂರುದ ಉಲ್ಲಾಯೆ ತುಳು ಭಕ್ತಿಗೀತೆಯ ಸಿಡಿಯನ್ನು ಎಲ್ಲೂರು ಮಹತೋಭಾರ ದೇವರ ಸನ್ನಿಧಿಯಲ್ಲಿ ನೆರವೇರುತ್ತಿರುವ ಸೀಮೆಯ ರಾಶಿಪೂಜೆಯ ಸಂದರ್ಭ ಸೀಮೆಯ ತಂತ್ರಿಗಳಾದ ವೇ.ಮೂ . ಲಕ್ಷ್ಮೀನಾರಾಯಣ ತಂತ್ರಿಯವರು ಹಾಗೂ ಶ್ರೀ ಕೆ.ಎಲ್. ಕುಂಡತಾಯರವರು ಬಿಡುಗಡೆಗೊಳಿಸಿ ಹರಸಿದರು.

ರಾಜೇಶ್ ಆರ್.ಕೆ ಸಾಹಿತ್ಯದಲ್ಲಿ , ರತ್ನಾಕರ ಆಚಾರ್ಯ ಕುಂಜೂರು ಮತ್ತು ರವಿರಾಜ್ ಕುಲಾಲ್ ಎರ್ಮಾಳ್ ರವರ ಗಾಯನವಿದೆ.

ಸಿಡಿ ಬಿಡುಗಡೆ ಸಂದರ್ಭದಲ್ಲಿ ಎಲ್ಲೂರುಗುತ್ತು ಪ್ರಪುಲ್ಲ ಶೆಟ್ಟಿ, ನಡಿಮನೆ ದೇವರಾಜ್ ರಾವ್, ಎಲ್ಲೂರು ಯುವಕ ಮಂಡಲದ ಅಧ್ಯಕ್ಷರು ನಾಗರಾಜ್, ನಮ್ಮ ಕಾಪು ನ್ಯೂಸ್ ತಂಡದ ಉದಯ ಕುಲಾಲ ಉಪಸ್ಥಿತರಿದ್ದರು.