ಎಲ್ಲೂರುದ ಉಲ್ಲಾಯೆ ತುಳು ಭಕ್ತಿಗೀತೆಯ ಸಿಡಿ ಬಿಡುಗಡೆ
Posted On:
23-02-2021 08:24PM
ಕಾಪು : ಕುಂಜೂರಿನ ಮೋಕೆದ ಕಲಾವಿದರು ಸಿದ್ಧಗೊಳಿಸಿದ ಎಲ್ಲೂರುದ ಉಲ್ಲಾಯೆ
ತುಳು ಭಕ್ತಿಗೀತೆಯ ಸಿಡಿಯನ್ನು ಎಲ್ಲೂರು ಮಹತೋಭಾರ ದೇವರ ಸನ್ನಿಧಿಯಲ್ಲಿ ನೆರವೇರುತ್ತಿರುವ ಸೀಮೆಯ ರಾಶಿಪೂಜೆಯ ಸಂದರ್ಭ ಸೀಮೆಯ ತಂತ್ರಿಗಳಾದ ವೇ.ಮೂ .
ಲಕ್ಷ್ಮೀನಾರಾಯಣ ತಂತ್ರಿಯವರು ಹಾಗೂ ಶ್ರೀ ಕೆ.ಎಲ್. ಕುಂಡತಾಯರವರು ಬಿಡುಗಡೆಗೊಳಿಸಿ ಹರಸಿದರು.
ರಾಜೇಶ್ ಆರ್.ಕೆ ಸಾಹಿತ್ಯದಲ್ಲಿ , ರತ್ನಾಕರ ಆಚಾರ್ಯ ಕುಂಜೂರು ಮತ್ತು ರವಿರಾಜ್ ಕುಲಾಲ್ ಎರ್ಮಾಳ್ ರವರ ಗಾಯನವಿದೆ.
ಸಿಡಿ ಬಿಡುಗಡೆ ಸಂದರ್ಭದಲ್ಲಿ ಎಲ್ಲೂರುಗುತ್ತು ಪ್ರಪುಲ್ಲ ಶೆಟ್ಟಿ, ನಡಿಮನೆ ದೇವರಾಜ್ ರಾವ್, ಎಲ್ಲೂರು ಯುವಕ ಮಂಡಲದ ಅಧ್ಯಕ್ಷರು ನಾಗರಾಜ್, ನಮ್ಮ ಕಾಪು ನ್ಯೂಸ್ ತಂಡದ ಉದಯ ಕುಲಾಲ ಉಪಸ್ಥಿತರಿದ್ದರು.