ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ಸುಗ್ಗಿ ಮಾರಿಪೂಜೆಯಂದು ನಡೆಯಲಿರುವ ಶಿಲಾ ಪುಷ್ಪ ಸಮರ್ಪಣೆಯ ಪ್ರಯುಕ್ತ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಸಮಾಜ ಸೇವಕ ಲೀಲಾದರ ಶೆಟ್ಟಿ ಯವರ ನೇತೃತ್ವದಲ್ಲಿ ಗ್ರಾಮ ಸಮಿತಿಯನ್ನು ರಚಿಸುವ ಬಗ್ಗೆ ಚರ್ಚಿಸಲಾಯಿತು.
ಅರ್ಚಕ ಪದ್ಮನಾಭ ಅಚಾರ್ಯ, ಸಮಿತಿಯ ಸದಸ್ಯರುಗಳಾದ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ನಾಗೇಶ್ ಸುವರ್ಣ, ಮೋಹನ್ ಕಲ್ಯಾ, ಹರೀಶ್ ನಾಯಕ್ , ಸುಧಾಕರ್ ಶೆಟ್ಟಿ ಹೆಜಮಾಡಿ, ಭುಜಂಗ ಶೆಟ್ಟಿ ಹೆಜಮಾಡಿ,ರವೀಂದ್ರ ಮಲ್ಲಾರ್, ವಿಶ್ವನಾಥ್ ಶೆಟ್ಟಿ ಮಜೂರ್,ದಿವಾಕರ್ ಹೆಜಮಾಡಿ, ಶ್ರೀನಿವಾಸ ಕೋಟಿಯಾನ್, ಶುಭ ಬಂಗೇರ ಹೆಜಮಾಡಿ, ಉಪಸ್ಥಿತರಿದ್ದರು.