ಪಡುಬಿದ್ರಿ : ಶಿಕ್ಷಕ - ಶಿಕ್ಷಣ ಸಂಸ್ಥೆ ಹಾಗೂ ದೇವಾಲಯ ವ್ಯವಸ್ಥೆಯಲ್ಲಿ ಸುವ್ಯವಸ್ಥೆ ಸ್ಥಾಪಿಸಿದ ಪಡುಬಿದ್ರಿಯ ವೆಂಕಟ್ರಮಣಾಚಾರ್ಯ ಅವರ ಜನ್ಮ ಶತಾಬ್ದ ಕಾರ್ಯಕ್ರಮವು ಆ.15 ರಂದು ಪೂರ್ವಾಹ್ಮ 11 ಗಂಟೆಗೆ ಪಡುಬಿದ್ರಿಯ ಗಣಪತಿ ಪ್ರೌಢ ಶಾಲೆಯ ವಿಬುಧೇಶ ತೀರ್ಥ ಸಭಾಭವನದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ "ಆಚಾರ್ಯಂ ಪ್ರಣಮಾಮಃ" ಸ್ಮರಣೆಯ ಸಂಪುಟವು ಅನಾವರಣಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.