ಮಕ್ಕಳ ಕೃಷಿ ಆಸಕ್ತಿಗೆ ನೆರವಾದ ಉಡುಪಿಯ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ತಂಡ
Posted On:
07-03-2021 10:58PM
ಉಡುಪಿ, ಮಾ.7 : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬ್ರಹ್ಮಾವರದ ಮಠಪಾಡಿಯಲ್ಲಿ ಇರುವ ಕೂಲಿ ಕಾರ್ಮಿಕರ ವಸತಿ ಗೃಹಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಕಳೆದ ವರ್ಷ ಮಾಡಿದ ಕೃಷಿ -ಖುಷಿ ಕಾರ್ಯಕ್ರಮದ ಮಕ್ಕಳ ಉತ್ಸಾಹ ನೋಡಿ ಇಂದು ಅವರ ಅನುಕೂಲಕ್ಕೆ ಬೇಕಾದಂತೆ ಅಲ್ಲಿಯ ಜಾಗವನ್ನು ತರಕಾರಿ ಬೆಳೆ ಬೆಳೆಯಲು ಹದತಟ್ಟು ಮಾಡಿಕೊಡಲಾಯಿತು.
ಈ ಕಾರ್ಯಕ್ರಮ ಆಸರೆ ತಂಡದ ಸ್ಥಾಪಕಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯಿತು. ಮಕ್ಕಳ ಉತ್ಸಾಹಕ್ಕೆ ಮುಂದಿನ ದಿನಗಳಲ್ಲಿ ನಮ್ಮ ಬೆಳೆ ನಾವು ಅನ್ನುವ ಮುಂದಿನ ಶೀರ್ಷಿಕೆಗೆ ಹೆಜ್ಜೆ ಇಡಲು ನಮ್ಮ ಆಸರೆ ತಂಡವು ಮುಂದಾಗಿದೆ.
ಈ ಕಾರ್ಯಕ್ರಮದಲ್ಲಿ ಆಸರೆ ತಂಡದ ಸಂಸ್ಥಾಪಕಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಅವರ ನೇತೃತ್ವದಲ್ಲಿ ನಡೆದಂತಹ ಈ ಕಾರ್ಯಕ್ರಮದಲ್ಲಿ ಜಯರಾಮ್ ನೈರಿ ಮಟಪಾಡಿ, ಸೂರ್ಯ ಗಾಣಿಗ,ಅಜಯ್ ರಾವ್, ವಿಜಯ ಬಾಲನಿಕೇತನ ಮಟಪಾಡಿಯ ಮಕ್ಕಳು ಉಪಸ್ಥಿತರಿದ್ದರು.