ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಅವಘಡ - ವ್ಯಕ್ತಿ ಮೃತ
Thumbnail
ಸುರತ್ಕಲ್ : ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಕೌಂಟರ್‌ ವೇಟ್ ತಾಗಿ ವ್ಯಕ್ತಿಯೋರ್ವ ಗಾಯಗೊಂಡಿದ್ದು ಗಾಯಾಳುವನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತ ಪಟ್ಟಿರುವ ಘಟನೆ ಜೂನ್ 22 ರಂದು ನಡೆದಿದೆ. ಮೃತ ವ್ಯಕ್ತಿ ಕೇಶವ (47) ಕುತ್ತೆತ್ತೂರು ಗ್ರಾಮದ ಎಂ ಆರ್ ಪಿ ಎಲ್ ವರ್ಕ್ ಶಾಪ್ ಬಳಿ ಗುತ್ತಿಗೆ ಆಧಾರದಲ್ಲಿ ರಿಗ್ಗರ್ ಕೆಲಸ ಮಾಡಿಕೊಂಡಿದ್ದರು. ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಟ್ರೇಲರ್ ನಲ್ಲಿ ಇದ್ದ ಕೌಂಟರ್‌ ವೇಟ್ ನ್ನು ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಕೌಂಟರ್‌ ವೇಟ್ ತಾಗಿ ಈ ಅವಘಡ ಸಂಭವಿಸಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
23 Jun 2022, 11:27 PM
Category: Kaup
Tags: