ಸಿ.ಜಿ.ಕೆ ರಂಗ ಪ್ರಶಸ್ತಿ-2022 ಪುರಸ್ಕೃತರಾದ ನಟ, ರಂಗನಿರ್ದೇಶಕ, ರಂಗಸಂಘಟಕ ಪ್ರದೀಪ್ ಚಂದ್ರ ಕುತ್ಪಾಡಿ
Thumbnail
ಉಡುಪಿ : ನಮ ತುಳುವೆರ್ ಕಲಾ ಸಂಘಟನೆ (ರಿ.) ನಾಟ್ಕದೂರು, ಮುದ್ರಾಡಿ ಆಯೋಜನೆಯಲ್ಲಿ ಸಂಸ ಥಿಯೇಟರ್‌, ಬೆಂಗಳೂರು - ಕರ್ನಾಟಕ ಬೀದಿ ನಾಟಕ ಅಕಾಡೆಮಿ ಮತ್ತು ಎಂ.ಜಿ.ಎಂ ಕಾಲೇಜು, ಉಡುಪಿ ಸಹಭಾಗಿತ್ವದಲ್ಲಿ ಸಿ.ಜಿ.ಕೆ ಬೀದಿರಂಗ ದಿನ ಪ್ರಯುಕ್ತ ಜೂನ್ 26 ರಂದು ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಸಿ.ಜಿ.ಕೆ ರಂಗ ಪ್ರಶಸ್ತಿ-2022 ನ್ನು ನಟ, ರಂಗನಿರ್ದೇಶಕ, ರಂಗಸಂಘಟಕ ಪ್ರದೀಪ್ ಚಂದ್ರ ಕುತ್ಪಾಡಿ ಇವರಿಗೆ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ನಮ ತುಳುವೆರ್ ಕಲಾ ಸಂಘಟನೆ (ರಿ.) ತಂಡದಿಂದ ಗುರುರಾಜ ಮಾರ್ಪಳ್ಳಿ ರಚನೆ ಮತ್ತು ನಿರ್ದೇಶನದ ಅವ್ವ ನನ್ನವ್ವ ನಾಟಕದ 75ನೇ ಪ್ರದರ್ಶನ ಜರಗಿತು.
27 Jun 2022, 11:22 PM
Category: Kaup
Tags: