ಮರೆಯಾಯಿತು ಶ್ರಮಜೀವಿಯ ಬದುಕು : ಶ್ರೀ ಸಂಜೀವ ಪೂಜಾರಿ
ಕಾಪು : ಮೂಡುಬೆಳ್ಳೆ ಗರಡಿಯ ಪೂ ಪೂಜನೆಯ ಸಂಜೀವ ಪೂಜಾರಿಯವರು ಜೂನ್ 28ರಂದು ದೈವಾಧೀನರಾದರು.
ಶ್ರದ್ದಾ ಭಕ್ತಿಯ ಕೇಂದ್ರ ಬ್ರಹ್ಮ ಬೈದ್ಯರುಗಳ ಗರೋಡಿಯಲ್ಲಿ ಪೂ ಪೂಜನೆಯ ಪೂಜಾರಿಯಾಗಿ ಕಾಯ ವಾಚಾ ಮನಪೂರ್ವಕವಾಗಿ ಆತ್ಮ ಸಮರ್ಪಣಾ ಮನೋಭಾವದಿಂದ ಬೈದ್ಯರುಗಳ ಸೇವಾ ಕಾರ್ಯವನ್ನು ಮಾಡಿದ್ದಲ್ಲದೆ ಬೈದ್ಯರುಗಳು ಇತರೆ ಕ್ಷೇತ್ರಗಳಲ್ಲಿ ಆಯಾ ಸಂಪ್ರದಾಯ ಪರಂಪರೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದವರು.
ಹಿರಿಯರಿಂದ ಬಂದ ರೂಢಿಗತ ಆಚರಣೆಗಳನ್ನು ಚಾಚೂ ತಪ್ಪದ ರೀತಿಯಲ್ಲಿ ಪಾಲಿಸಿಕೊಂಡು ಬಂದವರು. ಕೃಷಿ, ಹೈನುಗಾರಿಕೆಯಂತಹ ಶ್ರಮಭರಿತ ಕಾಯಕದಲ್ಲಿ ತೊಡಗಿಕೊಂಡ ಕ್ರೀಯಾಶೀಲ ವ್ಯಕ್ತಿ ಇಂದು ಅಕಾಲಿಕವಾಗಿ ಬೈದ್ಯರುಗಳ ಪಾದ ಸೇರಿರುವುದನ್ನು ತಿಳಿಸಲು ವಿಷಾದವಾಗುತ್ತಿದೆ.
ಆಗಲಿದ ಸಂಜೀವ ಪೂಜಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಅವರ ಕುಟುಂಬಕ್ಕೆ ದು:ಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.
