ಕಟಪಾಡಿ : ಕಸದ ರಾಶಿ - ಸಾರ್ವಜನಿಕರಿಗೆ ತೊಂದರೆ ; ಸಮಸ್ಯೆ ಬಗೆಹರಿಸಲು ಸ್ಥಳೀಯ ನಿವಾಸಿಗಳ ಆಗ್ರಹ
Thumbnail
ಕಟಪಾಡಿ : ಇಲ್ಲಿನ ಏಣಗುಡ್ಡೆ ಪಂಚಾಯತ್ ವ್ಯಾಪ್ತಿಯ ಹಳೆ ರಸ್ತೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಹಾಗೂ ನಾಗಬನ ಸಮೀಪ ಇರುವ ಸ್ಥಳದಲ್ಲಿ ಪ್ಲಾಸ್ಟಿಕ್, ಮಧ್ಯದ ಬಾಟಲು,ಮಲ ಮೂತ್ರದ ಪ್ಯಾಡ್,ಮಾಂಸದ ಮೂಳೆ ಮುಂತಾದವುಗಳಿಂದ ಕಸದ ರಾಶಿ ಆಗಿ ಮಾರ್ಪಾಡು ಆಗಿದೆ. ಈಗಾಗಲೇ ಪಂಚಾಯತ್ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೂ ಪ್ರಯೋಜನವಿಲ್ಲ. ಇಲ್ಲಿನ ಕಸ ವಿಲೇವಾರಿ ಮಾಡಬೇಕಾಗಿದೆ. ಹತ್ತಿರದ ಫ್ಲಾಟ್, ಮನೆಯಲ್ಲಿಯ ಒಟ್ಟಾದ ಕಸ, ಪ್ಲಾಸ್ಟಿಕ್ ಹಾಗೆ ಮಲ ಮೂತ್ರದ ಪ್ಯಾಡ್ಗಳನ್ನು ಬಿಸಾಡುವುದು ಗಮನಕ್ಕೆ ಬಂದಿದೆ. ನಾಯಿಗಳು ಒಟ್ಟಾಗಿ ಎಲ್ಲವನ್ನು ರಸ್ತೆಯಲ್ಲಿ ಹರಡಿ ಹಾಕುತ್ತಿದ್ದು ಸ್ಥಳೀಯ ಮನೆಯವರಿಗೂ, ದಾರಿ ಹೋಕರಿಗೂ ನಡೆದಾಡಲು ಅಸಹ್ಯ ಉಂಟಾಗಿದೆ. ಅಲ್ಲದೆ ಆರೋಗ್ಯ ಸಮಸ್ಯೆಯಾಗಿದೆ. ದಯವಿಟ್ಟು ಈ ಕೂಡಲೇ ಕಸವನ್ನು ವಿಲೇವಾರಿ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮರವನ್ನು ಇಟ್ಟು ಯಾರು ಕಸ ಹಾಕುತ್ತಾರೋ ಅವರ ಮನೆ ಅಥವಾ ಫ್ಲಾಟ್ ಗೆ ಅಲ್ಲಿ ಒಟ್ಟಾದ ಎಲ್ಲ ಕಸಗಳನ್ನು ತಂದು ವಾಪಸ್ ಹಾಕಲಾಗುವುದು. ಇಲ್ಲದಿದ್ದಲ್ಲಿ ಅವರಿಂದಲೇ ದಂಡ ಸಮೇತ ಕಸ ವಿಲೇವಾರಿ ಮಾಡಿಸಲಾಗುವುದು ಎಂದು ನೊಂದ ಕಟಪಾಡಿ ಹಳೆ ರಸ್ತೆ ಗ್ರಾಮಸ್ಥರು ಎಚ್ಚರಿಸಿದ್ದಾರೆ.
Additional image
26 Jul 2022, 05:12 PM
Category: Kaup
Tags: