ಕುದ್ರೋಳಿ : 18 ಗಂಟೆಗಳ ಶ್ರಮದಿಂದ ಧಾನ್ಯ, ತರಕಾರಿ, ಅಕ್ಕಿ ಇತ್ಯಾದಿ ವಸ್ತುಗಳಿಂದ ಮೂಡಿದ ತಿರಂಗ
ಮಂಗಳೂರು : ಸ್ವಾತಂತ್ರ್ಯದ 75ರ ಅಮೃತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಗುರುಬೆಳದಿಂಗಳು ಸೇವಾ ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಪ್ರಸಿದ್ಧ ಕುದ್ರೋಳಿ ದೇವಳ ಮುಂಭಾಗ ಧಾನ್ಯ, ತರಕಾರಿ, ಅಕ್ಕಿ, ಕಳಶ, ಬಾಳೆ ಎಲೆ, ವೀಳ್ಯದೆಲೆ ಇತ್ಯಾದಿ ವಸ್ತುಗಳಿಂದ ಭಾರತದ ತ್ರಿವರ್ಣ ಧ್ವಜವನ್ನು ರಚಿಸಲಾಗಿದೆ.
ಕಲಾವಿದ, ಛಾಯಾಗ್ರಾಹಕ ಪುನೀಕ್ ಶೆಟ್ಟಿ ನೇತೃತ್ವದಲ್ಲಿ 30 ಗುರುಬೆಳದಿಂಗಳು ಸದಸ್ಯರು ಹಾಗೂ ಕ್ಷೇತ್ರದ ಸಿಬ್ಬಂದಿ ವರ್ಗದ ಸಹಕಾರದಿಂದ 18 ಗಂಟೆಗಳ ನಿರಂತರ ಕಾರ್ಯದಿಂದ ಮೂಡಿದೆ.
ಇದಕ್ಕಾಗಿ 900 ಕೆಜಿ ಧಾನ್ಯ, 100 ಕೆಜಿ ತರಕಾರಿ, 38 ಅಡಿ ವೃತ್ತ, 54 ಕಳಶ, 108 ಬಾಳೆ ಎಲೆ, 500 ವೀಳ್ಯದೆಲೆ, 100 ಕೆಜಿ ಬೆಳ್ತಿಗೆ ಅಕ್ಕಿ ಉಪಯೋಗಿಸಲಾಗಿದೆ.
