ಕಳತ್ತೂರು : 32 ನೇ ವರ್ಷದ ಗಣೇಶೋತ್ಸವ ವಿಜೃಂಭಣೆಯಿಂದ ಸಂಪನ್ನ
ಕಳತ್ತೂರು : ಕಾಪು ತಾಲೂಕಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುಂಚಲಕಾಡು ಕಳತ್ತೂರು ಇವರ ನೇತೃತ್ವದಲ್ಲಿ ಶ್ರೀ ಶೈಲಾ ಮಂಟಪ ಪುಂಚಲಕಾಡು ಇಲ್ಲಿ ಶ್ರೀ ಕೇಶವ ತಂತ್ರಿ
ಪೌರೋಹಿತ್ಯದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ ನಂತರ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ ವತಿಯಿಂದ ಯಕ್ಷಗಾನ ಬಯಲಾಟ ನಡೆಯಿತು.
ಸಾಯಂಕಾಲ ಚಿಂತನ ಚೆಂಡೆ ಬಳಗ ಮುಂಡ್ಕೂರು ಹಾಗೂ ವಾಸು ಪಣಿಯೂರು ಅವರಿಂದ ಬ್ಯಾಂಡ್ ಸೆಟ್, ಕ್ರೀಡಾ ಸ್ಪರ್ಧಿಗಳಿಗೆ ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮ ಜರಗಿತು. ಶ್ರೀ ದೇವರಿಗೆ ಸಂಜೆ ಪೂಜೆ ಮುಗಿದು ಅಪಾರ ಸಂಖ್ಯೆಯ ಭಕ್ತರೊಂದಿಗೆ ವಿಸರ್ಜನಾ ಮೆರವಣಿಗೆ ನಡೆಯ ನಂತರ ಗಣಪತಿ ವಿಗ್ರಹವನ್ನ ಕಳತ್ತೂರು ಅರಬಿಕಟ್ಟೆ ಹೊಳೆಯಲ್ಲಿ ಜಲ ಸ್ತಂಭನಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
