ಲಯನ್ಸ್ ಕ್ಲಬ್ ಬಂಟಕಲ್ಲು ಬಿಸಿರೋಡ್ : ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Thumbnail
ಬಂಟಕಲ್ಲು : ಲಯನ್ಸ್ ಕ್ಲಬ್ ಬಂಟಕಲ್ಲು ಬಿಸಿರೋಡ್ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಪಾಂಬೂರು ಚರ್ಚ್ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ವಿಲ್ಫ್ರೆಡ್ ಪಿಂಟೋ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಎಮ್ ಜೆ ಎಫ್ ಲ.ಡಾ. ನೇರಿ ಕರ್ನೇಲಿಯೊ ಹಾಗೂ ಜಿಇಟಿ ಎಮ್ ಜೆ ಎಫ್ ಲ. ರಾಜೀವ್ ಕೋಟ್ಯಾನ್ ರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಂಟಕಲ್ಲು , ಪಾಂಬೂರು , ಹೇರೂರು ಹಾಗೂ ಪಡುಬೆಳ್ಳೆ ಆಸುಪಾಸಿನ ಸುಮಾರು 8 ಶಾಲೆಯ ಎಂಬತ್ತು ಶಿಕ್ಷಕರನ್ನು ಹಾಗೂ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಂಟಕಲ್ಲು ಆಸುಪಾಸಿನ ಇಪ್ಪತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು. ಸರಕಾರಿ ಪ್ರಾಥಮಿಕ ಶಾಲೆ ರಾಜೀವ್ ನಗರ ಉಡುಪಿ ಇದರ ಹಿರಿಯ ಶಿಕ್ಷಕ ಬಂಟಕಲ್ಲು ಸತ್ಯ ಸಾಯಿ ಪ್ರಸಾದ್ ಅವರು ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ಪಡೆದಿದ್ದು ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ವಿನ್ಸೆಂಟ್ ಆಳ್ವರವರು ಒಬ್ಬ ಉತ್ತಮ ಶಿಕ್ಷಕನ ಜವಾಬ್ದಾರಿ ಮತ್ತು ನಾವು ನಮ್ಮನ್ನು ಕೇಳಬೇಕು ಶಿಕ್ಷಕ ವೃತ್ತಿಗೆ ತಾನು ಎಷ್ಟು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ,ವಿದ್ಯಾರ್ಥಿಗಳ ಪ್ರಗತಿಯಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ ಬಗ್ಗೆ ಮಾತನಾಡಿದರು. 2021-22 ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ಸುಮಾರು 17 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು . ಕಾರ್ಯಕ್ರಮವನ್ನು ಲ. ಅನಿತ ಡಿಸಿಲ್ವಾ ಮತ್ತು ಲ. ವಿಜಯ್ ಧೀರಜ್ ನಡೆಸಿಕೊಟ್ಟರು. ತನಿಷ್ಕಾ ಗೋಲ್ಡ್ & ಡೈಮೆಂಡ್ ಜ್ಯುವೆಲರಿ ಉಡುಪಿ ಕಾರ್ಯಕ್ರಮದ ಪ್ರಾಯೋಜಕತ್ವವಹಿಸಿದ್ದರು. ಲಯನ್ಸ್ ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ ನೆರೆದಿರುವ ಎಲ್ಲಾ ಅತಿಥಿ ಹಾಗೂ ಶಿಕ್ಷಕ ವೃಂದ ಶಿಕ್ಷಕರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಲ. ಉಮೇಶ್ ಕುಲಾಲ್ ವಂದಿಸಿದರು.
Additional image
14 Sep 2022, 09:15 AM
Category: Kaup
Tags: