ಶಿರ್ವದ ಹದಗೆಟ್ಟ ರಸ್ತೆ ದುರಸ್ತಿಗೊಳಿಸಿದ ಬಂಟಕಲ್ಲು ನಾಗರಿಕ ಸೇವಾ ಸಮಿತಿ ; ಸಾರ್ವಜನಿಕರಿಂದ ಶ್ಲಾಘನೆ
Thumbnail
ಶಿರ್ವ : ಇಲ್ಲಿನ ರಾಜ್ಯ ರಸ್ತೆಯು ಗಣಪತಿ ದೇವಸ್ಥಾನ ಮತ್ತು ಜುಮ್ಮಾ ಮಸೀದಿ ಬಳಿ ತೀವ್ರ ಹದಗೆಟ್ಟಿದ್ದು, ಶಿಕ್ಷಕ ಅಲ್ವಿನ್ ದಾಂತಿಯವರು ರಸ್ತೆಯ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಘಟನೆಯ ಬಳಿಕ ಎಚ್ಚೆತ್ತ ಸಾರ್ವಜನಿಕರು ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಭಾನುವಾರ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ರಾಮರಾಯ ಪಾಟ್ಕರ್ ಮತ್ತು ತಂಡದ ಸದಸ್ಯರು ಗುಂಡಿಗಳಿಗೆ ಜಲ್ಲಿ ಕಾಂಕ್ರೀಟ್ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇವರ ಸೇವಾಕಾರ್ಯಕ್ಕೆ ಶಿರ್ವ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಅಭಿನಂದನೆ ಸಲ್ಲಿಸಿದ್ದಾರೆ.
18 Sep 2022, 08:36 PM
Category: Kaup
Tags: