ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇಗುಲಕ್ಕೆ ಕಾಶಿ ಮಠಾಧೀಶರ ಭೇಟಿ ; ಪಾದಪೂಜೆ
Thumbnail
ಕಾಪು : ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇಗುಲಕ್ಕೆ ಮಂಗಳವಾರ ಕಾಶಿ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ ವೆಂಕಟರಮಣ ದೇವರ ದರ್ಶನ ಪಡೆದರು. ದೇವಳದ ವತಿಯಿಂದ ಸ್ವಾಮೀಜಿಯವರ ಪಾದ ಪೂಜೆ ನೆರವೇರಿಸಲಾಯಿತು. ದೇವಳದ ಪ್ರಧಾನ ಅರ್ಚಕ ಕಮಲಾಲಕ್ಷ ಭಟ್, ಅರ್ಚಕರಾದ ಶ್ರೀನಿವಾಸ್ ಭಟ್ ಮತ್ತು ರವೀಂದ್ರ ಭಟ್ ಶಿರ್ವ ರವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭ ಆಡಳಿತ ಮೊಕ್ತೆಸರ ಪ್ರಸಾದ್ ಶೆಣೈ, ಮೊಕ್ತೆಸರರಾದ ರಾಮನಾಯಕ್, ಶ್ರೀಕಾಂತ್ ಭಟ್, ರಾಜೇಶ್ ಶೆಣೈ, ಸದಾಶಿವ ಕಾಮತ್, ಸದಸ್ಯರಾದ ಮಜೂರು ರಾಜೇಶ್ ಶೆಣೈ, ಚಂದ್ರಕಾಂತ್ ಕಾಮತ್, ಕೃಷ್ಣಾನಂದ್ ನಾಯಕ್, ಅತುಲ್ ಕುಡ್ವಾ ಮೊದಲಾದವರು ಉಪಸ್ಥಿತರಿದ್ದರು.
Additional image
18 Oct 2022, 08:00 PM
Category: Kaup
Tags: