ಉಡುಪಿ : ಉದ್ದಿಮೆ ಆರಂಭಿಸದೆ, ಹೆಚ್ಚುವರಿ ಜಾಗ ಪಡೆದ ಕಂಪನಿಗಳ ಜಾಗವನ್ನು ಸರಕಾರ ಮರುವಶ/ಮರು ಹಂಚಿಕೆ ಮಾಡಬೇಕು - ಯೋಗೇಶ್ ವಿ ಶೆಟ್ಟಿ
ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸರಕಾರದಿಂದ ಭೂಮಿ ಪಡೆದು ಪೂರ್ಣ ಕೈಗಾರಿಕೆಗಳನ್ನು ಸ್ಥಾಪಿಸದೆ / ವಿಸ್ತರಣೆ ಮಾಡದೆ ಇರುವ ಭೂಮಿಯನ್ನು ಸರಕಾರ ತನ್ನ ವಶಕ್ಕೆ ವಾಪಸು ಪಡೆಯಬೇಕು ಅಥವಾ ನೀಡಿಕೆಯಾದ ಭೂಮಿಯನ್ನು ಮರುಹಂಚಿಕೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಜನತಾದಳ(ಜಾತ್ಯತೀತ)ದ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿ ಆಗ್ರಹಿಸಿದ್ದಾರೆ.
ಸಾಧಾರಣ ಅಂದಾಜು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7599 ಎಕ್ರೆ ಮತ್ತು ಉಡುಪಿ ಜಿಲ್ಲೆಯಲ್ಲಿ 2719 ಎಕ್ರೆ ಸೇರಿ ಒಟ್ಟು 10318 ಎಕ್ರೆ ಕೈಗಾರಿಕೆ ವಿಸ್ತರಣೆ ಮಾಡದೆ ಖಾಲಿ ಜಾಗ ಇದ್ದು,ಹಲವಾರು ಕಂಪನಿಗಳಿಗೆ ವಿತರಣೆಯಾಗಿದ್ದು, ಅಂತೆಯೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಅಂಕಿ ಅಂಶ ಇದೇ ರೀತಿಯಲ್ಲಿ ಇದೆ.
ಕೈಗಾರಿಕೆಗಳು ಬೆಳೆಯಲಿ ಆರ್ಥಿಕ ಪ್ರಗತಿಗಾಗಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಲಿ ಎನ್ನುವ ಕಾರಣಕ್ಕೆ ಕೈಗಾರಿಕೆ ಸ್ಥಾಪಿಸುವರೇ ಸರಕಾರದಿಂದ ಭೂಮಿ ಕೊಡಲ್ಪಟ್ಟಿತ್ತು . ಆದರೂ ಕೆಲವು ಕೈಗಾರಿಕಾ ಸಂಸ್ಥೆಗಳು ಸಾಧಾರಣ 15 /30ವರ್ಷಗಳಿಂದ ವಿಸ್ತರಣೆ ಮಾಡಿದೆ ಹೆಚ್ಚುವರಿಯಾಗಿ ಜಾಗವನ್ನು ಹಾಗೆಯೇ ಉಳಿಸಿಕೊಂಡಿರುತ್ತದೆ. ಅಂತಹ ಜಾಗವನ್ನು ವಾಪಸು ಪಡೆದು, ಮರುಹಂಚಿಕೆಮಾಡಬೇಕೆಂದು ಸರಕಾರವನ್ನು ಒತ್ತಾಯ ಮಾಡುತ್ತಿದ್ದೇವೆ.
ಪರಿಹಾರ ನೀಡದ ವಶಪಡಿಸಿ ಕೊಂಡಂತಹ ಜಾಗವನ್ನು ಸಹಾ ಕೂಡಲೇ ವಾಪಸ್ ಪಡೆದು ಐಟಿ ಹಬ್ ಮತ್ತು ಇತರ ಕೈಗಾರಿಕೆಗಳನ್ನು ಸ್ಥಾಪಿಸುವ ಆಸಕ್ತರಿಗೆ ಮರು ವಿತರಣೆ ಮಾಡಿ ಉದ್ಯೋಗ ಸೃಷ್ಟಿ ಮಾಡುವರೇ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಅದೇ ರೀತಿ ಜಾಗ ನೀಡಿದವರಿಗೆ/ ಕುಟುಂಬಸ್ಥರಿಗೆ / ಸ್ಥಳೀಯರಿಗೆ ಉದ್ಯೋಗ ನೀಡುವರೆ ಸರಕಾರವನ್ನು ಒತ್ತಾಯ ಪಡಿಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
