ಕಟಪಾಡಿ : ಸುಭಾಸ್ ನಗರದಲ್ಲಿ ನೂತನ ಬಾಲವನ ಉದ್ಘಾಟನೆ ; ಮಕ್ಕಳ ಆಟಿಕೆಗಳ ಕೊಡುಗೆ
ಕಟಪಾಡಿ : ರೋಟರಿ ಕ್ಲಬ್ ಶಂಕರಪುರ ಹಾಗೂ ಗ್ರಾಮ ಪಂಚಾಯತ್ ಕಟಪಾಡಿ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ನೂತನ ಬಾಲವನವನ್ನು ಸುಭಾಸ್ ನಗರದ ಅಂಗನವಾಡಿಯ ಬಳಿಯಲ್ಲಿ ನಿರ್ಮಿಸಲಾಯಿತು.
ಕಾರ್ಯಕ್ರಮವನ್ನು ಮಕ್ಕಳ ಆಟಿಕೆಯ ದಾನಿಗಳಾದ ದಿವಂಗತ ಅಪ್ಪಿ ತೋಮಣಿ ಸುವರ್ಣ ''ಪಪ್ಪಾ ಅಮ್ಮ ಛಾಯಾ ಸುಭಾಸ್ನಗರ '' ಇವರ ಸ್ಮರಣಾರ್ಥ ಮಕ್ಕಳಾದ ಮಂಜುಳಾ ನಾಗರಾಜ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಎಸ್ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾದ ರೋಟರಿ ವಲಯ ಸೇನಾನಿ ಯಶೋಧರ ಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿ ಡೇನಿಯಲ್ ಡೊಮ್ನಿಕ್ ಡಿಸೋಜಾ ಶುಭ ಹಾರೈಸಿದರು. ಅಂಗನವಾಡಿಯ ಶಿಕ್ಷಕಿಯಾದ ಕಾಂತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿನ ಹೆಚ್ಚಿನ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಕಾಮಗಾರಿಯನ್ನು ನಡೆಸಿದ ಪ್ರಭಾಕರ್ ಪಾಲನ್, ಮಕ್ಕಳ ಆಟಿಕೆಯ ಕೆಲಸಗಳನ್ನು ನಿರ್ವಹಿಸಿದ ಮೊಹಮ್ಮದ್ ಸಾಧಿಕ್ ಇವರುಗಳನ್ನು ಗುರುತಿಸಲಾಯಿತು.
ಸ್ಥಳೀಯರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ಸ್ವಾಗತಿಸಿದರು. ವಿನ್ಸೆಂಟ್ ಸಲ್ದಾನ ಪ್ರಾರ್ಥಿಸಿದರು. ಅಂತೋನಿ ಡೇಸಾ ಪ್ರಸ್ತಾಪನೆಗೆಗೈದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ವೈ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ದಾನಿಗಳಾದ ಮಂಜುಳಾ ನಾಗರಾಜ್ ಇವರನ್ನು ಸನ್ಮಾನಿಸಲಾಯಿತು. ಚಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
