ಮಾಚ್೯ 30 : ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ
ಕಾಪು : ತಾಲೂಕಿನ ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆಯೊಂದಿಗೆ ವಿಶಿಷ್ಟವಾಗಿ ಶ್ರೀ ರಾಮನವಮಿಯ ಆಚರಣೆಯು ಶ್ರೀ ಸೌಭಾಗ್ಯ ಹೆಣ್ಣುಮಕ್ಕಳ ಭಾಗ್ಯೋದಯದ ಬೆಳಕು ಎಂಬ ಸೇವಾ ಕಾರ್ಯಕ್ರಮದ ಮೂಲಕ ಮಾಚ್೯ 30ರಂದು ಬೆಳಿಗ್ಗೆ 9 ಗಂಟೆಗೆ ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಜರಗಲಿದೆ.
21 ಮಕ್ಕಳಿಗೆ ಶ್ರೀ ರಾಮನವಮಿಯಂದು ಉಚಿತ ಚಿನ್ನದ ಮೂಗುತಿ ಧಾರಣೆ ನಡೆಯಲಿದೆ.
ಈಗಾಗಲೇ ಎರಡು ವರುಷಗಳಿಂದ 330ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆಯನ್ನು ಏಕಜಾತಿ ಧರ್ಮ ಪೀಠದ ಸ್ಥಾಪಕರಾದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ದಿವ್ಯ ಸಂಕಲ್ಪದಲ್ಲಿ ನಡೆದುಕೊಂಡು ಬರುತ್ತಿದೆ.
