ಉಡುಪಿ : ಟ್ರಿನಿಟಿ ಸೆಂಟ್ರಲ್ ಸ್ಕೂಲ್ - ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಯುವ ಉದ್ಯಮಿ ಶ್ರೀನಿವಾಸ್ ಜಿ ಆಯ್ಕೆ
ಉಡುಪಿ : ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಇದರ ನೂತನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಯುವ ಉದ್ಯಮಿ ಶ್ರೀನಿವಾಸ್ ಜಿ ಯವರು ಶಾಲೆಯಲ್ಲಿ ನಡೆದ ಮಹಾಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಬಹುಮತದಿಂದ ಚುನಾಯಿತರಾಗಿದ್ದಾರೆ.
ಕಾಯ೯ದಶಿ೯ಯಾಗಿ ಅಶ್ವಿತ ಪುಟಾ೯ಡೊ, ಜೊತೆ ಕಾಯ೯ದಶಿ೯ಯಾಗಿ ದೀಪ್ತಿ ಸುವಣ೯, ಕೋಶಾಧಿಕಾರಿಯಾಗಿ ಸುಧೀಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಡೊಮಿನಿಕ್ ಸುನಿಲ್ ಲೋಬೋ ನಡೆಸಿಕೊಟ್ಟರು. ಈ ಸಂದಭ೯ ಉಪ ಮುಖ್ಯ ಶಿಕ್ಷಕ ರವಿರಾಜೇಶ್ ಸೆರಾವೋ, ಅಕಾಡೆಮಿಕ್ ಕೋ. ಅಡಿ೯ನೇಟರ್ ಮ್ಯಾಗಿ ಲೂವೀಸ್ ಸಂಘದ ಪೂವಾ೯ಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
