ಕಾಪು : ಕುತ್ಯಾರು ಕೇಂಜ ಶ್ರೀ ಬ್ರಹ್ಮ ಬೈದೆರುಗಳ ಗರಡಿ - ಆಟಿ ತಿಂಗಳ ಅಗೆಲು ಸೇವೆ ಸಂಪನ್ನ
Thumbnail
ಕಾಪು : ತಾಲೂಕಿನ ಎಲ್ಲೂರು ಸೀಮೆಯ ಇತಿಹಾಸ ಪ್ರಸಿದ್ಧ ಕುತ್ಯಾರು ಕೇಂಜ ಗರಡಿಯ ದಿವ್ಯ ಸಾನಿಧ್ಯದಲ್ಲಿ ವರ್ಷಂಪ್ರತಿ ಜರಗುವ ಆಟಿ ತಿಂಗಳ ಅನ್ನ ನೈವೇದ್ಯದ ಅಗೆಲು ಸೇವೆ ಬುಧವಾರ ಸಂಪನ್ನಗೊಂಡಿತು. ತುಳುನಾಡಿನ ಗರಡಿಗಳಲ್ಲಿ ಎಲ್ಲೂರು ಸೀಮೆಯ ಕೇಂಜ, ಎಲ್ಲೂರು, ಪಣಿಯೂರು, ಕಳತ್ತೂರು, ಅಡ್ವೆ, ಕೊಳಚೂರು ಗರಡಿಗಳಲ್ಲಿ ಆಟಿ ತಿಂಗಳಲ್ಲಿ ಅಗೆಲು ಸೇವೆ ನಡೆಯುತ್ತದೆ. ಮೊದಲ ಅಗೆಲು ಸೇವೆ ಕೇಂಜ ಗರಡಿಯಲ್ಲಿ ನಡೆಯುತ್ತದೆ. ಆಟಿ ತಿಂಗಳಲ್ಲಿ ಶ್ರೀ ಬ್ರಹ್ಮ ಬೈದೆರುಗಳು ಕೇಂಜದ ಪವಿತ್ರ ಸತ್ಯದ ಮಣ್ಣಿನಲ್ಲಿ ಕಲೆ ಕಾರ್ನಿಕ ತೋರ್ಪಡಿಸಿ ನೆಲೆಯಾದ ದ್ಯೋತಕವಾಗಿ ಈ ದೇವತಾ ಕಾರ್ಯ ಜರಗುತ್ತಿರುವುದು ವಿಶೇಷವಾಗಿದೆ. ಈ ಸಂದರ್ಭ ಗರಡಿ ಮನೆ ಪ್ರಮುಖರು, ಊರಿನ ಪ್ರಮುಖರು, ಭಕ್ತಾದಿಗಳು ಉಪಸ್ಥಿತರಿದ್ದರು.
Additional image
26 Jul 2023, 11:38 PM
Category: Kaup
Tags: