ಕಾಪು : ಮರ ಬಿದ್ದು ವ್ಯಕ್ತಿ ಮೃತ್ಯು ; ಇಬ್ಬರಿಗೆ ಗಾಯ
Thumbnail
ಕಾಪು : ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂದಾಡಿಯಲ್ಲಿ ಮರವೊಂದನ್ನು ತೆರವುಗೊಳಿಸುವಾಗ ಮರ ಕಡಿಯಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಮೃತಪಟ್ಟ ವ್ಯಕ್ತಿ ಸುಧೀರ್ ಮಾಂಜಿ (59) ಬಿಹಾರ ಮೂಲದವನಾಗಿದ್ದು. ಮರ ತೆರವು ಸಂದರ್ಭ ಮೂವರ ಮೇಲೆ ಬಿದ್ದಿದ್ದು ಇಬ್ಬರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪರಿಶೀಲಿಸಿದ್ದಾರೆ.
02 Oct 2023, 04:57 PM
Category: Kaup
Tags: