ಕಾಪು : ಎಸ್.ಕೆ.ಪಿ.ಎ ವತಿಯಿಂದ ಗೋವುಗಳ ಪೂಜೆ, ಹಿಂಡಿ ವಿತರಣೆ
Thumbnail
ಕಾಪು : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಕಾಪು ವಲಯದ ವತಿಯಿಂದ ದೀಪಾವಳಿ ಪ್ರಯುಕ್ತ ಕಾಪು ಗೋ ಶಾಲೆಯಲ್ಲಿ ಗೋಪೂಜೆ ಆಚರಿಸಲಾಯಿತು. ಕಾಪು ಶ್ರೀ ಲಕ್ಷ್ಮಿ ಜನಾರ್ದನ ದೇವಳದ ಸಮೀಪದ ಗೋಶಾಲೆಯ ಗೋಪಾಲಕೃಷ್ಣ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ, ಗೋವುಗಳಿಗೆ ಹಿಂಡಿ, ಫಲ, ದವಸ ಧಾನ್ಯಗಳನ್ನು ತಿನ್ನಿಸಲಾಯಿತು. ಈ ಸಂದರ್ಭದಲ್ಲಿ ಕಾಪು ವಲಯದ ಅಧ್ಯಕ್ಷ ಸಚಿನ್ ಉಚ್ಚಿಲ, ಗೌರವಾಧ್ಯಕ್ಷ ಕರುಣಾಕರ ನಾಯಕ್‌, ಕಾರ್ಯದರ್ಶಿ ರಾಘವೇಂದ್ರ ಭಟ್‌, ಉಪಾಧ್ಯಕ್ಷ ಸಂತೋಷ್‌ ಕಾಪು, ಸತೀಶ್‌ ಅದಮಾರು, ಪೂರ್ವಾಧ್ಯಕ್ಷರುಗಳಾದ ಸುಬ್ರಹ್ಮಣ್ಯ ಐತಾಳ್‌, ಅನಂತರಾಜ್‌ ಭಟ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ  ಕೃಷ್ಣ ರಾವ್‌  ಹಾಗೂ ಸದಸ್ಯರು ಉಪಸ್ಥಿತರಿದ್ದರು.
13 Nov 2023, 12:59 PM
Category: Kaup
Tags: