ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ : ಕಾಪು ವಲಯದ ಪದಪ್ರದಾನ ಸಮಾರಂಭ
Thumbnail
ಕಾಪು : ಬೇರೆಯವರ ಮುಖದಲ್ಲಿ ನಗು ತರಿಸುವ ಛಾಯಾಗ್ರಾಹಕರ ಕಾರ್ಯ ದೇವರು ಮೆಚ್ಚುವಂತದ್ದು. ತಂತ್ರಜ್ಞಾನ ಬದಲಾವಣೆಗೆ ತಕ್ಕಂತೆ ಛಾಯಾಗ್ರಾಹಕರು ಇರಬೇಕಾಗಿದೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ‌ಗುರ್ಮೆ ಹೇಳಿದರು. ಅವರು ಮಂಗಳವಾರ ಕಾಪುವಿನ ಹೋಟೆಲ್ ಕೆ 1 ನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘಟನೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ ಇದರ ಕಾಪು ವಲಯದ ಪದಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಧಿಕಾರ ಹಸ್ತಾಂತರ : ಎಸ್ ಕೆ ಪಿ ಎ ದ.ಕ, ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ಸಮ್ಮುಖದಲ್ಲಿ ಎಸ್ ಕೆ ಪಿ ಕಾಪು ವಲಯದ ಅಧ್ಯಕ್ಷ ವಿನೋದ್ ಕಾಂಚನ್ ನಿಯೋಜಿತ ಅಧ್ಯಕ್ಷ ಸಚಿನ್ ಉಚ್ಚಿಲ ಅವರಿಗೆ, ಕಾರ್ಯದರ್ಶಿ ರಾಜೇಶ್ ಶಂಕರಪುರ ನಿಯೋಜಿತ ಕಾರ್ಯದರ್ಶಿ ರಾಘವೇಂದ್ರ ಭಟ್ ಅವರಿಗೆ, ಕೋಶಾಧಿಕಾರಿ ರಾಘವೇಂದ್ರ ಭಟ್ ನಿಯೋಜಿತ ಕೋಶಾಧಿಕಾರಿ ಕಿರಣ್ ಕಾಪುರವರಿಗೆ ಅಧಿಕಾರ ಹಸ್ತಾಂತರಿಸಿದರು. ಸನ್ಮಾನ : ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ರಂಗಕರ್ಮಿ ಗಣೇಶ್ ರಾವ್ ಎಲ್ಲೂರು, ನೂತನ ಅಧ್ಯಕ್ಷ ಸಚಿನ್ ಉಚ್ಚಿಲ, ನಿರ್ಗಮಿತ ಅಧ್ಯಕ್ಷ ವಿನೋದ್ ಕಾಂಚನ್ ದಂಪತಿಗಳನ್ನು ಸನ್ಮಾನಿಸಲಾಯಿತು. ಬಹುಮಾನ ವಿತರಣೆ : ಉಚ್ಚಿಲ ದಸರಾ ಬಗ್ಗೆ ಆಯೋಜಿಸಲಾದ ವಿಡಿಯೋಗ್ರಫಿ ಸ್ಪರ್ಧಾ ವಿಭಾಗದಲ್ಲಿ ಸಂತೋಷ್ ಕಾಪು (ಪ್ರಥಮ), ರಾಘವೇಂದ್ರ ಜೋಗಿ (ದ್ವಿತೀಯ), ಪ್ರಕಾಶ್ ಆಚಾರ್ಯ (ತೃತೀಯ), ಛಾಯಾಗ್ರಹಣ ವಿಭಾಗದಲ್ಲಿ ಪ್ರದೀಪ್ ಉಪ್ಪೂರು (ಪ್ರಥಮ), ಹರೀಶ್ ಆಚಾರ್ಯ ಉಡುಪಿ (ದ್ವಿತೀಯ), ರತನ್ ಶೆಟ್ಟಿ (ತೃತೀಯ) ಬಹುಮಾನ ಪಡೆದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಕೆ ಪಿ ಎ ದ.ಕ, ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ವಹಿಸಿದ್ದರು. ಈ ಸಂದರ್ಭ ಮೊಗವೀರ ಮಹಾಜನ ಸಂಘ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಎಸ್ ಕೆ ಪಿ ಎ ದ.ಕ ಮತ್ತು ಉಡುಪಿ ಸಂಚಾಲಕರಾದ ಕರುಣಾಕರ ಕಾನಂಗಿ, ಎಸ್ಕೆಪಿಎ ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್ ಬಂಟ್ವಾಳ, ಎಸ್ ಕೆ ಪಿ ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ,ಎಸ್ ಕೆಪಿಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಎಸ್ ಕೆ ಪಿ ಎ ಉಪಾಧ್ಯಕ್ಷ ಜಯಕರ ಸುವರ್ಣ, ಪದಾಧಿಕಾರಿಗಳಾದ ಕರುಣಾಕರ ನಾಯಕ್, ಸತೀಶ್ ಶರ್ಮಾಳು, ಸಂತೋಷ್ ಕಾಪು, ದೀಪಕ್ ಶೆಣೈ, ಕಿರಣ್ ಕಾಪು, ಪ್ರವೀಣ್ ಕಾಪು, ಅರುಲ್ ಶಿರ್ವ, ವಿಕ್ರಂ ಭಟ್, ಉದಯ ಇನ್ನಾ, ವೀರೇಂದ್ರ ಶಿರ್ವ, ವಿನೋದ್ ಕಾಂಚನ್, ಕೃಷ್ಣರಾವ್, ರವಿ ಕುಮಾರ್, ಶ್ರೀನಿವಾಸ ಐತಾಳ್, ಉದಯ್ ಮುಂಡ್ಕೂರು, ಅಶೋಕ್ ಪಡುಬಿದ್ರಿ, ಅಶೋಕ್ ಸುರಭಿ, ಇರ್ಷಾದ್ ಬೆಳಪು, ರವಿರಾಜ್ ಶೆಟ್ಟಿ ಬೆಳ್ಮಣ್ ಮತ್ತಿತರರು ಉಪಸ್ಥಿತರಿದ್ದರು. ರವಿ ಕುಮಾರ್ ಕಟಪಾಡಿ ಸ್ವಾಗತಿಸಿದರು. ರಾಘವೇಂದ್ರ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಭಟ್ ವಂದಿಸಿದರು.
Additional image
22 Nov 2023, 07:41 AM
Category: Kaup
Tags: