ಉಡುಪಿ : ಅಯೋಧ್ಯೆ ಶ್ರೀ ರಾಮ ಪ್ರತಿಷ್ಟಾ ಕಾಯ೯ - ಉಚಿತ ವೈದ್ಯಕೀಯ ಶಿಬಿರ
Thumbnail
ಉಡುಪಿ : ಅಯೋಧ್ಯೆ ಶ್ರೀ ರಾಮ ಪ್ರತಿಷ್ಟಾ ಕಾಯ೯ದ ನಿಮಿತ್ತ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಭಾರತೀಯ ಜನ್ ಔಷಧಿ ಕೇಂದ್ರದ ವತಿಯಿಂದ ಸೋಮವಾರ ಉಚಿತ ವೈದ್ಯಕೀಯ ಶಿಬಿರ ಜನ ಔಷಧಿ ಕೇಂದ್ರದ ವಠಾರದಲ್ಲಿ ನಡೆಯಿತು. ಕಾಯ೯ಕ್ರಮದಲ್ಲಿ ಲೋoಬಾಡ್೯ ಮೆಮೋರಿಯಲ್ ಆಸ್ಪತ್ರೆ (ಮಿಷನ್) ಇದರ ವೈದ್ಯಾಧಿಕಾರಿ ಡಾ| ಗಣೇಶ್ ಕಾಮತ್, ಮತ್ತು ಇತರ ವೈದ್ಯರು ಭಾಗವಹಿಸಿದ್ದರು. ಮಾಹೆ ಮಣಿಪಾಲದ ಡಾI ಸವಿತಾ ಬಾಸ್ರಿ, ಡಾI ಆದಿತ್ಯ ಶೆಟ್ವಿ, ಡಾ| ಶ್ರೀಧರ ಡಿ, ಡಾ| ಅಂಕಿತಾ ಶೆಟ್ಟಿ ಮಾಹಿತಿ ನೀಡಿದರು. ಜಯಂಟ್ಸ್ ಪದಾಧಿಕಾರಿಗಳಾದ ಸುಂದರ ಪೂಜಾರಿ, ವಿವೇಕಾನಂದ ಕಾಮತ್, ಶ್ರೀನಾಥ್, ವೈದ್ಯಕೀಯ ಪ್ರತಿನಿಧಿ ಸಂಘದ ಕಾಯ೯ದಶಿ೯ ಪ್ರಸನ್ನ ಕಾರಂತ, ಮಿಲ್ಟನ್, ಅಣ್ಣಯ್ಯದಾಸ್, ರೋಹಿ ರತ್ನಾಕರ ಉಪಸ್ಥಿತರಿದ್ದರು.
22 Jan 2024, 10:09 PM
Category: Kaup
Tags: