ಕುತ್ಯಾರು : ಶ್ರೀ ರಾಮಾಯಣ ಕಥಾ ಮಾಲಿಕೆ ಸಮಾರೋಪ
ಕುತ್ಯಾರು : ಆನೆಗೊಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು ಇಲ್ಲಿ ಜನವರಿ 10 ರಿಂದ 23ರವರೆಗೆ ರಾಮಾಯಣದ ಏಳು ಕಾಂಡಗಳ ಕಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಶ್ರೀ ರಾಮಾಯಣ ಕಥಾ ಮಾಲಿಕೆಯನ್ನು ನಡೆಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಕಥಾ ನಿರೂಪಣೆ ಮಾಡಿದ ಪಾಂಡುರಂಗ ಶಾನುಬಾಗ್ ಇವರನ್ನು ಆಡಳಿತ ಮಂಡಳಿ ಉಪಾಧ್ಯಕ್ಷ ವಿವೇಕ ಆಚಾರ್ಯ ಮಂಚಕಲ್ ಮತ್ತು ಶಾಲಾ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಗೌರವಿಸಿದರು.
ಶಿಕ್ಷಕ ವೃಂದದವರು ಮತ್ತು ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸತೀಶ್ ಕುತ್ಯಾರು ಸ್ವಾಗತಿಸಿ ಸಂಸ್ಥೆಯ ಪ್ರಾಂಶುಪಾಲರಾದ ಸಂಗೀತ ರಾವ್ ವಂದಿಸಿದರು.
