ನಮ್ಮನೆ ಪಿಲಾರು ಸಾಂತೂರು ಜವನೆರ್ :ರಕ್ತದಾನ ಶಿಬಿರ
ಕಾಪು : ತಾಲೂಕಿನ ಮುದರಂಗಡಿಯ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಸ್ಪತ್ರೆ ಹಾಗೂ ನಮ್ಮನೆ ಪಿಲಾರು ಸಾಂತೂರು ಜವನೆರ್ ಇವರ ಸಹಯೋಗದಲ್ಲಿ ಆಟೋ ಚಾಲಕ ದಿ. ಸಂದೀಪ್ ಶೆಟ್ಟಿ (ಪುಂತು )ಇವರ ಎರಡನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಸತತವಾಗಿ 50 ನೇ ಬಾರಿ ರಕ್ತದಾನ ಮಾಡಿದ ಶಿಕ್ಷಕ ಶ್ರೀ ಚಂದ್ರಹಾಸ ಪ್ರಭು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಲಾಯಿತು.
ಉಡುಪಿ ಜಿಲ್ಲಾ ಆಸ್ಪತ್ರೆಯ ಡಾ.ವೀಣಾ ಹಾಗೂ ಕಾರ್ಯಕ್ರಮ ಆಯೋಜಕರು ಉಪಸ್ಥಿತರಿದ್ದರು.
