ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ - ಷಷ್ಟ್ಯಬ್ದ ಸಂಭ್ರಮ ; ಹನ್ನೆರಡು ದಿನಗಳ ಭಜನಾ ಕಾರ್ಯಕ್ರಮ
Thumbnail
ಎಲ್ಲೂರು : ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ) ಇದರ ಅರವತ್ತನೇ ವರ್ಷದ ಸಂಭ್ರಮಾಚರಣೆ ಷಷ್ಟ್ಯಬ್ದ ಸಂಭ್ರಮ ಪ್ರಯುಕ್ತ ಸತತ 288 ಗಂಟೆಗಳ ಹನ್ನೆರಡು ದಿನಗಳ ಭಜನಾ ಕಾರ್ಯಕ್ರಮ "ಅಖಂಡ ದ್ವಾದಶಾಹ ವೈಭವಂ " ಊರ ಪರವೂರ ಮಹನೀಯರು ನಂದಾದೀಪವನ್ನು ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ಆಗಮ ಪಂಡಿತರಾದ ವಿದ್ವಾನ್ ಕೇಂಜ ಶ್ರೀಧರ ತಂತ್ರಿಗಳು, ಅಖಂಡ ದ್ವಾದಶಾಹ ಭಜನಾ ವೈಭವಮ್ ಸಮಿತಿಯ ಗೌರವಾಧ್ಯಕ್ಷರಾದ ಕೆ‌.ಎಲ್ ಕುಂಡಂತಾಯರು, ನಂದಿಕೂರು ದೇವಳದ ಮಧ್ವರಾಯ ಭಟ್, ರಘು ಶೆಟ್ಟಿಗಾರ್, ಡಾ.ಭವಾನಿ ಶಂಕರ್, ಸುನೀಲ್ ಕುಮಾರ್ ಶೆಟ್ಟಿ ಸಾಂತೂರು, ನಾಗರತ್ನ ರಾವ್ ದಂಪತಿಗಳು, ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿಗಾರ್ ದಂಪತಿಗಳು, ಕಾರ್ಯದರ್ಶಿ ಕೃಷ್ಣಾನಂದ ರಾವ್, ಅರ್ಚಕ ಗುರುರಾಜ ಆಚಾರ್ಯ ಮತ್ತಿತರು ಹಾಜರಿದ್ದರು. ಮಾತೃ ಮಂಡಳಿಯ ಭಜಕರಿಂದ ಆರಂಭಗೊಂಡ ಭಜನಾ ವೈಭವದಲ್ಲಿ ಪ್ರಸಿದ್ದ ದಾಸವಾಣಿ ಕೀರ್ತನಕಾರ ಮೈಸೂರು ರಾಮಚಂದ್ರಚಾರ್ ಭಜನೆ ಹಾಡಿದ್ದು ವಿಶೇಷವಾಗಿತ್ತು‌.
21 May 2024, 06:31 PM
Category: Kaup
Tags: