ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ತಂಬಾಕು ಮುಕ್ತ ದಿನಾಚರಣೆ
Thumbnail
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಸೈಟ್ಸ್-ಗೈಡ್ಸ್ ಎನ್.ಸಿ.ಸಿ.ವಿದ್ಯಾರ್ಥಿಗಳ ನೇತೃತ್ವದಲ್ಲಿ ತಂಬಾಕು ಮುಕ್ತ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಂಶುಪಾಲರಾದ ಎಂ.ನೀಲಾನಂದ ನಾಯ್ಕ ಇವರು ತಂಬಾಕು ಪದಾರ್ಥಗಳನ್ನು ಉರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನಸ್ ಇವರು ತಂಬಾಕು ಪದಾರ್ಥದ ಸೇವನೆಯು ಜನರ ದೇಹವನ್ನು ದಹಿಸುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ತಂಬಾಕಿನಂತಹ ಅಮಲು ಪದಾರ್ಥಗಳಿಂದ ದೂರವಿದ್ದು ತನ್ನ ಪರಿಸರವನ್ನು ಕೂಡಾ ಆರೋಗ್ಯದಾಯಕವಾಗಿರಲು ಪ್ರಯತ್ನಿಸಬೇಕು ಎಂಬ ಕಿವಿಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ಸೈಟ್ಸ್-ಗೈಡ್ಸ್ ಶಿಕ್ಷಕಿಯರಾದ ವೀಣಾ ನಾಯಕ್, ವಾಣಿ, ಹಾಗೂ ಶಿಕ್ಷಣ ಸಂಯೋಜಕರಾದ ಶಿವಣ್ಣ ಬಾಯಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೀನಿಕೇತ್ ಬಾಯಾರ್ ಸ್ವಾಗತಿಸಿದರು. ಮನ್ವಿತಾ ಕಾರ್ಯಕ್ರಮ ನಿರೂಪಿಸಿದರು. ಆನಂದ್ ಸಿಂಗ್ ವಂದಿಸಿದರು.
31 May 2024, 05:28 PM
Category: Kaup
Tags: