ಕಾಪು ತಾಲ್ಲೂಕು ಕಚೇರಿಯಲ್ಲಿ ಪರಿಸರ ದಿನ ಆಚರಣೆ
ಕಾಪು : ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಗಿಡಗಳನ್ನು ನೆಡುವುದರ ಮೂಲಕ ಬುಧವಾರ ಪರಿಸರ ದಿನಾಚರಣೆ ಆಚರಿಸಲಾಯಿತು.
ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಮತ್ತು
ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ರವರು ಗಿಡ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ತಹಶಿಲ್ದಾರ್ ಪ್ರತಿಭಾ ಆರ್ ನಾವಿಲ್ಲದಿದ್ದರೂ ಗಿಡ-ಮರಗಳು ಬದುಕುತ್ತವೆ ಆದರೆ ಗಿಡ-ಮರಗಳು ಇಲ್ಲದಿದ್ದರೆ ನಾವು ಬದುಕುವುದಕ್ಕೆ ಸಾಧ್ಯವೇ ಇಲ್ಲ ಆದ್ದರಿಂದ ಇಂದು ನಾವೆಲ್ಲರೂ ಸೇರಿ ಪರಿಸರವನ್ನು ಪ್ರೀತಿಸಬೇಕು, ಆರಾಧಿಸಬೇಕು. ಅದನ್ನು ರಕ್ಷಿಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಅದಕ್ಕಾಗಿ ಪರಿಸರ ದಿನಾಚರಣೆಯ ದಿನ ಮಾತ್ರ ಸಸಿಗಳನ್ನು ನೆಟ್ಟು ನಾನು ಪರಿಸರ ಪ್ರೇಮಿ ಎಂದು ಬಿಂಬಿಸಿ ಕೊಳ್ಳುವುದು ಬೇಡ. ಪ್ರತಿ ವರ್ಷ,ಪ್ರತಿ ದಿನ ಪ್ರತಿ ಕ್ಷಣ ಗಿಡ ಮರಗಳನ್ನು ಪ್ರೀತಿಸಿ, ಆರಾಧಿಸಿ ರಕ್ಷಿಸಿದಾಗ ಮಾತ್ರ ನಾವು ನಿಜವಾದ ಪರಿಸರ ಪ್ರೇಮಿಗಳು. ತಹಶಿಲ್ದಾರ್ ಕಚೇರಿಯ ಆವರಣದಲ್ಲಿ ಉದ್ಯಾನವನ ನಿರ್ಮಿಸಿ ಸೌಂದರ್ಯೀಕರಣಗೊಳಿಸಲು ಪ್ರಯತ್ನಿಸಲಾಗುವುದು. ಅದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು.
ತಹಶಿಲ್ದಾರ್ ಕಚೇರಿಯ ಉಪ ತಹಶಿಲ್ದಾರ್ ರವಿಕಿರಣ್, ದೇವಕಿ, ಅಶೋಕ್ ಕೋಟೆಕಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
