ಕಾರ್ಕಳ : ಮುಂಡ್ಕೂರುವಿನಲ್ಲಿ ಬೆಂಕಿಗಾಹುತಿಯಾದ ಮನೆ
Thumbnail
ಕಾರ್ಕಳ : ಇಲ್ಲಿನ ಮುಂಡ್ಕೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅನಾಹುತದಿಂದ ಮನೆ ಹಾಗೂ ಮನೆಯಲ್ಲಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಇಂದು ನಡೆದಿದೆ. ಮುಂಡ್ಕೂರು ಗ್ರಾಮದ ಹಳೆ ಮನೆ ಪುರುಷೋತ್ತಮ ಶೆಟ್ಟಿಯವರ ಮನೆ ಇದಾಗಿದ್ದು ಬೆಲೆಬಾಳುವ ವಸ್ತುಗಳ ಸಹಿತ ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಅಂದಾಜು 5 ಲಕ್ಷಕ್ಕೂ ಅಧಿಕ ಮೊತ್ತದ ನಷ್ಟ ಉಂಟಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ಜನಪ್ರತಿನಿಧಿಗಳು, ಪಂಚಾಯತ್ ಮಟ್ಟದ ಅಧಿಕಾರಿಗಳಾಗಲಿ ಇಷ್ಟರವರೆಗೆ ಭೇಟಿ ನೀಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರಾದ ಸಂತೋಷ್ ನಮ್ಮ‌ ಕಾಪು‌ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
27 Jun 2024, 05:51 PM
Category: Kaup
Tags: