ಕಳತ್ತೂರು ದಿವಾಕರ ಡಿ. ಶೆಟ್ಟಿಯವರ ಮನೆಯಲ್ಲಿ ಸೌಹಾರ್ದ ದೀಪಾವಳಿ ಆಚರಣೆ
ಕಾಪು : ಸಮಾಜ ಸೇವಕ ಕೃಷಿಕ ಕಳತ್ತೂರು ದಿವಾಕರ ಡಿ. ಶೆಟ್ಟಿಯವರ ಮನೆಯಲ್ಲಿ ಕ್ರಿಶ್ಚಿಯನ್ ಬಾಂಧವರೊಂದಿಗೆ ಹಾಗೂ ಊರಿನವರೊಂದಿಗೆ
ದೀಪಾವಳಿ ಹಬ್ಬ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಲಿಯೋ ಮೆಂಡೋನ್ಸರವರು ಮಾತನಾಡಿ, ನಾವು ಪ್ರತಿ ವರ್ಷವು ದೀಪಾವಳಿ ಹಬ್ಬವನ್ನು ಸೌಹಾರ್ದಯುತವಾಗಿ ನಮ್ಮ ಗ್ರಾಮದ ಬೇರೆ ಬೇರೆ ಮನೆಗಳಲ್ಲಿ ಆಚರಿಸುತ್ತ ಬಂದಿದ್ದೇವೆ. ಈ ವರ್ಷ ದಿವಂಗತ ದೇಜು ಶೆಟ್ಟಿ ಮತ್ತು ಜಲಜ ಶೆಟ್ಟಿಯವರ ಮಗನಾದ ದಿವಾಕರ ಡಿ. ಶೆಟ್ಟಿ ಯವರ ಮನೆಯಲ್ಲಿ ದೀಪಾವಳಿ ಆಚರಣೆ ಮಾಡಿದ್ದು ನಮ್ಮ ಸೌಭಾಗ್ಯವಾಗಿದೆ. ದಿವಾಕರ ಡಿ. ಶೆಟ್ಟಿಯವರ ಕುಟುಂಬ ಊರಿನವರೊಂದಿಗೆ ಎಲ್ಲಾ ಜಾತಿ, ಧರ್ಮದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಎಂದು ತಿಳಿಸಿ ದೀಪಾವಳಿ ಹಬ್ಬಕ್ಕೆ ಶುಭ ಕೋರಿದರು.
ಕಳತ್ತೂರು ಚರ್ಚ್ ನ ಅಧ್ಯಕ್ಷೆಯಾದ ಗ್ಲಾಡಿಸ್ ಅಲ್ಮೆಡರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
