ಅಖಿಲ ಭಾರತ ದೈವರಾಧಾಕರ ಒಕ್ಕೂಟ ಉಡುಪಿ : ಸಭೆ ; ಆಮಂತ್ರಣ ಪತ್ರಿಕೆ ಬಿಡುಗಡೆ
Thumbnail
ಉಡುಪಿ : ಅಖಿಲ ಭಾರತ ದೈವರಾಧಾಕರ ಒಕ್ಕೂಟ ಉಡುಪಿ (ರಿ.) ಇದರ ಸಭೆ ನ.4ರಂದು ಉಡುಪಿ ತೆಂಕುಪೇಟೆ ಉಡುಪಿ ವುಡ್ ಲಾಂಡ್ಸ್ ಹೋಟೆಲ್ ಹತ್ತಿರ ಇರುವ ಶ್ರೀ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ಜರಗಿತು. ಈ ಸಂದರ್ಭ ಡಿಸೆಂಬರ್ 1 ರಂದು ನಡೆಯಲಿರುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಒಕ್ಕೂಟ ಸದಸ್ಯರ ಸಮ್ಮುಖದಲ್ಲಿ ದೈವಗಳಿಗೆ ಪ್ರಾರ್ಥನೆ ಮಾಡಿ ಬಿಡುಗಡೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ದಿನೇಶ್ ಪೂಜಾರಿ, ಒಕ್ಕೂಟದ ಕೋಶಾಧಿಕಾರಿಯಾದ ಭಾಸ್ಕರ್, ಉಪಾಧ್ಯಕ್ಷರಾದ ಸುಧಾಕರ್ ಪಾಣರ, ಜಯ ಮಡಿವಾಳ, ನವೀನ್ ಪಾತ್ರಿ ಕುಂಜಿಬೆಟ್ಟು, ಉದಯ ಮೆಂಡನ್, ವಾಸು ಶೇರಿಗಾರ, ಉಡುಪಿ ಜಿಲ್ಲಾಧ್ಯಕ್ಷರಾದ ಸುಧಾಕರ್ ಶೆಟ್ಟಿ, ಗೋಪಾಲ್ ಮಡಿವಾಳ, ಕೃಷ್ಣ ಮಡಿವಾಳ, ವಿಜಯ ಮಡಿವಾಳ ಹಾಗೂ ತಾಲೂಕು ಅಧ್ಯಕ್ಷರಾದ ರಂಜಿತ್ ಶೇರಿಗಾರ, ಕಾರ್ಯದರ್ಶಿಯಾದ ಶಾಮ್ ರವಿ, ಸುಂದರ, ಸಂದೇಶ್ ಪೂಜಾರಿ, ಆಕಾಶ್, ಒಕ್ಕೂಟದ ಸಂಘಟನೆ ಕಾರ್ಯದರ್ಶಿಯಾದ ರಮೇಶ್ ಪೂಜಾರಿ ಹಾಗೂ ದಿನೇಶ್ ಪಾಣರ ಹಾಗೂ ಸದಸ್ಯರು ಉಪಸ್ಥಿತಿಯಿದ್ದರು.
Additional image
05 Nov 2024, 11:56 AM
Category: Kaup
Tags: