ಜ.17 : ಕಚ್ಚೂರು ಮಾಲ್ತಿದೇವಿ ಬಬ್ಬುಸ್ವಾಮಿ ಮೂಲಕ್ಷೇತ್ರಕ್ಕೆ ಪಡುಬಿದ್ರಿ ವಲಯದಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ
Thumbnail
ಪಡುಬಿದ್ರಿ : ಕಚ್ಚೂರು ಶ್ರೀಮಾಲ್ತಿದೇವಿ ಶ್ರೀಬಬ್ಬುಸ್ವಾಮಿ ಮೂಲಕ್ಷೇತ್ರದ ವಾರ್ಷಿಕ ಜಾತ್ರೆ ಮಹೋತ್ಸವದ ಪ್ರಯುಕ್ತ ಹಸಿರು ಹೊರೆಕಾಣಿಕೆ ಸಮರ್ಪಣೆ ಜ.17ರಂದು ಮದ್ಯಾಹ್ನ 12 ಗಂಟೆಗೆ ಸರಿಯಾಗಿ ಪಡುಬಿದ್ರಿ ವಲಯ ಹೊರೆಕಾಣಿಕೆ ಸಮಿತಿಯ ನೇತೃತ್ವದಲ್ಲಿ ಪಡುಬಿದ್ರಿ ಶ್ರೀಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪಡುಬಿದ್ರಿ ಏಳು ಮಾಗಣೆ, ವಲಯದ ವಿವಿಧ ಕೋಡ್ದಬ್ಬು ದೈವಸ್ಥಾನಗಳ ಗುರಿಕಾರರು ಹತ್ತು ಸಮಸ್ತರು, ಮುಂಡಾಲ ಯುವ ವೇದಿಕೆ ಪಡುಬಿದ್ರಿ, ವಿವಿಧ ಭಜನಾ ಮಂಡಳಿಗಳು ಮತ್ತು ಸಂಘ-ಸಂಸ್ಥೆಗಳ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ಪಡುಬಿದ್ರಿ ವಲಯ ಹೊರೆಕಾಣಿಕೆ ಸಮಿತಿಯ ದಿನೇಶ್ ಕಂಚಿನಡ್ಕ, ರಾಜು ಹೆಜಮಾಡಿ, ರವಿ ಬೊಗ್ಗರಿಲಚ್ಚಿಲ್, ಪ್ರವೀಣ್ ಎರ್ಮಾಳು, ಪ್ರಸನ್ನ ಪಡುಬಿದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
16 Jan 2025, 12:46 PM
Category: Kaup
Tags: