ಮಹಿಳಾ ಮತ್ತು ಮಕ್ಕಳ ಸುರಕ್ಷಾ ವೇದಿಕೆ ಒಂತಿಬೆಟ್ಟು ಹಿರಿಯಡ್ಕ : ಪ್ರಥಮ ವಾರ್ಷಿಕೋತ್ಸವ
Thumbnail
ಬಂಟಕಲ್ಲು : ಮಹಿಳಾ ಮತ್ತು ಮಕ್ಕಳ ಸುರಕ್ಷಾ ವೇದಿಕೆ (ರಿ.) ಒಂತಿಬೆಟ್ಟು ಹಿರಿಯಡ್ಕ ಇದರ ಪ್ರಥಮ ವಾರ್ಷಿಕೋತ್ಸವ ಜರಗಿತು. ಈ ಸಂದರ್ಭ ಮಾತನಾಡಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಕ್ಕಳಲ್ಲಿ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವಲ್ಲಿ ಮಾತೆಯರು ಮಹತ್ವದ ಪಾತ್ರವನ್ನು ವಹಿಸಬೇಕು. ರಾಮಾಯಣ, ಮಹಾಭಾರತ ನಮ್ಮ ಜೀವನದ ಉಸಿರಾಗಬೇಕು ಎಂದರು. ಗೀತಾ ನೃತ್ಯ ರೂಪಕ ಕಾರ್ಯಕ್ರಮ ನೀಡಿದ ಶ್ರೀ ಯತಿಗುರುರಾಯ ರೂಪಕ ತಂಡ 92ನೇ ಹೇರೂರು ಇದರ ನಿರ್ದೇಶಕಿಯಾಗಿರುವ ಅನಿತಾ ಉಮೇಶ್ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿವಿಧ ಸಾಧಕರು ಉಪಸ್ಥಿತರಿದ್ದರು. ಹೇರೂರು ಮಾಧವಾಚಾರ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
14 Apr 2025, 07:11 AM
Category: Kaup
Tags: