ದೇವರು ಬಟ್ರು ನೀರೆ ಶ್ರೀಪತಿ ಭಟ್ ನಿಧನ
ಕಾಪು : ಶ್ರೀ ಕ್ಷೇತ್ರ ಪೆರ್ಣಂಕಿಲದಲ್ಲಿ ಹಲವಾರು ವರ್ಷಗಳಿಂದ ಪಾರಂಪರಿಕವಾಗಿ ಉದ್ಭವ ಮಹಾಗಣಪತಿಯ ಉತ್ಸವ ಮೂರ್ತಿಯನ್ನು ಹೊತ್ತು ಬಲಿ ಉತ್ಸವ ನೆರವೇರಿಸಿ ಕೊಡುತ್ತಿದ್ದ ದೇವರು ಬಟ್ರು ಎಂದೇ ಪ್ರಸಿದ್ಧರಾದ ನೀರೆ ಶ್ರೀಪತಿ ಭಟ್ ಇಂದು ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಅಸುನೀಗಿದರು.
ಕಣಂಜಾರು ಮಡಿಬೆಟ್ಟು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಹಲವಾರು ದೇವಸ್ಥಾನಗಳಲ್ಲಿ ದೇವರ ಬಲಿಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
