ಕಾಪು : ರಾ.ಹೆ. 66 ರಲ್ಲಿ ಸರ್ವಿಸ್ ರಸ್ತೆ ನಿಮಾಣಕ್ಕೆ ಸಮಾಜ ಸೇವಕ ಜಯರಾಮ ಆಚಾರ್ಯ ಕಾಪು‌ ಆಗ್ರಹ
Thumbnail
ಕಾಪು : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಬೈಂದೂರುವರೆಗೆ ಎರಡು ಬದಿಗಳಲ್ಲೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಸಮಾಜ ಸೇವಕ ಜಯರಾಮ ಆಚಾರ್ಯ ಕಾಪು ಇವರು ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪುನರ್ಮನವಿ ನೀಡಿ ಆಗ್ರಹಿಸಿದ್ದಾರೆ. ಉಡುಪಿ ಜಿಲ್ಲೆಯ ಕೆಲವು ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಾಣ ಒಪ್ಪಿಗೆ, ಕೋಟೇಶ್ವರ, ಹೆಜಮಾಡಿ ಮದ್ದೆ 26 ಕಿ.ಮೀ ಸರ್ವಿಸ್ ರಸ್ತೆಗೆ ಅನುಮೋದನೆ ವಿಚಾರ ಕೇಳಿ ಸಂತೋಷವಾಯಿತು. ಆದರೆ ಎಲ್ಲೆಲ್ಲಿ ಅತೀ ಅವಶ್ಯಕತೆ ಇದೆ ಅಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡದೆ ಯಾದೃಚ್ಛಿಕ ಸರ್ವಿಸ್ ರಸ್ತೆ ನಿರ್ಮಾಣ ಮತ್ತು ಸ್ಕೈ ವಾಕ್ ವ್ಯವಸ್ಥೆ ಸರಿಯಲ್ಲ. ಉಡುಪಿ ಜಿಲ್ಲೆಯ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಅತಿ ಅಗತ್ಯವಿದೆ. ಸಾದಾರಣ ಒಟ್ಟು 70 ರಿಂದ 75 ಕಿ.ಮೀ. ಅಗತ್ಯವಾಗಿ ನಿರ್ಮಾಣವಾಗಬೇಕು, ಅಂತೆಯೇ ಪುರಸಭೆ, ತಾಲೂಕು ವ್ಯಾಪ್ತಿ ಮತ್ತು ಹೆಜಮಾಡಿಯಿಂದ ಬೈಂದೂರು ತನಕ ಸರ್ವಿಸ್ ರಸ್ತೆ ನಿರ್ಮಾಣವಾಗಲೇ ಬೇಕು. ಹಲವಾರು ಕಡೆ ಸರ್ವಿಸ್ ರಸ್ತೆ ಇಲ್ಲದೆ ಹಲವಾರು ಅಪಘಾತಗಳು ಈಗಾಗಲೇ ನಡೆದು ಹೋಗಿರುತ್ತದೆ. ಉಡುಪಿ ಜಿಲ್ಲೆಯ ಮಾನ್ಯ ಸಂಸದರು ಈ ಬಗ್ಗೆ ಪುನರ್ ಪರಿಶೀಲಿಸಿ ಎಲ್ಲಾ ಶಾಸಕರೊಂದಿಗೆ ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿ ಉಡುಪಿ ಜಿಲ್ಲೆಯ ಎನ್ ಎಚ್ 66 ರ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಮತ್ತು ಚರಂಡಿ ವ್ಯವಸ್ಥೆ ನಿರ್ಮಿಸಲು ಆಗ್ರಹಿಸಲಾಗಿತ್ತು. ಆದರೆ ಈ ಮನವಿಗೆ ಯಾವುದೇ ಸ್ಪಂದನೆ, ವ್ಯವಸ್ಥೆ ಆಗಲಿಲ್ಲ, ಉಡುಪಿ ಜಿಲ್ಲೆಯಲ್ಲಿ 2 ತಿಂಗಳಲ್ಲಿ 25ಕ್ಕೂ ಮಿಕ್ಕಿ ಅಪಘಾತಗಳು ಆಗಿ 9 ಹದಿಹರೆಯದ ಯುವಕರು ಪ್ರಾಣ ಕಳೆದುಕೊಂಡು ಅವರ ಕುಟುಂಬವು ಸಂಕಷ್ಟವನ್ನು ಅನುಭವಿಸುವಂಥಾಗಿರುತ್ತದೆ ಇದಕ್ಕೆ ಕಾರಣ ನಮ್ಮ ವ್ಯವಸ್ಥೆ ಹಾಗೂ ಸರಿಯಾದ ರೀತಿಯಲ್ಲಿ ಜಿಲ್ಲಾಡಳಿತ ಮತ್ತು ಪಾರ್ಲಿಮೆಂಟ್ ಸದಸ್ಯರು ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಕೇಂದ್ರ ಸರಕಾರದೊಂದಿಗೆ ಸ್ಪಂದಿಸದಿರುವುದು ಮುಖ್ಯ ಕಾರಣವಾಗಿರುತ್ತದೆ, ಇನ್ನಾದರೂ ಎಚ್ಚೆತ್ತುಕೊಂಡು ಉಡುಪಿ ಜಿಲ್ಲೆಯ ಎರಡು ಬದಿಗಳಲ್ಲೂ ಸರ್ವಿಸ್ ರಸ್ತೆ ಮತ್ತು ಡ್ರೈನೇಜ್ ಗಳನ್ನು ಕೂಡಲೇ ನಿರ್ಮಿಸಿ ಕೊಡಬೇಕು ಎಂದು ಪಾರ್ಲಿಮೆಂಟ್ ಸದಸ್ಯರನ್ನು ಕಾಪು ಜಯರಾಮ ಆಚಾರ್ಯರವರು ವಿನಂತಿಸಿದ್ದಾರೆ.
18 Oct 2025, 10:11 PM
Category: Kaup
Tags: