ಮೂಡುಬಿದ್ರಿ ನಿತ್ಯಾನಂದ ಶೆಟ್ಟಿ ಸಹಾಯಕ್ಕಾಗಿ ಮನವಿ
Thumbnail

ಮೂಡುಬಿದ್ರಿ: ನಿತ್ಯಾನಂದ ಶೆಟ್ಟಿ ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಗಂಟಲ್ ಕಟ್ಟೆಯ ನಿವಾಸಿ ತಾರೀಕು 30 11 2025 ರಂದು ವಾಹನ ಅಪಘಾತಕ್ಕೆ ಒಳಪಟ್ಟಿದ್ದು ಸೊಂಟದ ಮೂಳೆ ಮತ್ತು ಕಾಲುಗಳಿಗೆ ತೀವ್ರ ಏಟಾಗಿರುತ್ತದೆ.

ಸದ್ಯ ಇವರು ಮಂಗಳೂರಿನ ಎಜೆ ಆಸ್ಪತ್ರೆಯ ಸರಕಾರಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯವರು ತಕ್ಷಣ ಆಪರೇಷನ್ ನಡೆಸಬೇಕೆಂದು ತಿಳಿಸಿರುತ್ತಾರೆ.

ಚಿಕಿತ್ಸಾ ವೆಚ್ಚ ಸುಮಾರು 10 ಲಕ್ಷ ಅಂದಾಜಿಸಿದ್ದು. ಇವರದ್ದು ಬಡ ಕುಟುಂಬ ಆಗಿರುವ ಕಾರಣ ಆಸ್ಪತ್ರೆ ವೆಚ್ಚ ಭರಿಸಲು ಕಷ್ಟವಾಗುತ್ತಿದೆ. ಆದುದರಿಂದ ನಿತ್ಯಾನಂದ ಶೆಟ್ಟಿ ಅವರ ಕುಟುಂಬಸ್ಥರು ತಮ್ಮಲ್ಲಿ ಹಣದ ಸಹಾಯಕ್ಕಾಗಿ ಕೋರಿಕೊಳ್ಳುತ್ತಿದ್ದಾರೆ.

11 Dec 2025, 08:56 PM
Category: Kaup
Tags: #nammakaup #kaup