ಶಿರ್ವ : ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಹಿ.ಪ್ರಾ. ಶಾಲೆ ಶತಸಂಭ್ರಮೋತ್ಸವದಲ್ಲಿ ಶಿಕ್ಷಕಿಯರಿಗೆ ಸನ್ಮಾನ
ಶಿರ್ವ : ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಹಿ.ಪ್ರಾ. ಶಾಲೆ ಶತಸಂಭ್ರಮೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಕಳೆದ 4 ವರ್ಷಗಳಿಂದ ಸರಕಾರದ ವತಿಯಿಂದ ಯಾವುದೇ ಶಿಕ್ಷಕರಿಲ್ಲದೆ ಶಾಲಾ ಮುಖ್ಯ ಶಿಕ್ಷಕಿ ಸಹಿತ ಆರು ಶಿಕ್ಷಕಿಯರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್ ಸಹಿತ ಸಹಶಿಕ್ಷಕಿಯರಾದ ಶಾಲಿನಿ ಆಚಾರ್ಯ, ವಿನುತಾ ಆಚಾರ್ಯ, ಸುಮತಿ, ರೇಶ್ಮಾ, ಶ್ವೇತಾ ಇವರನ್ನು ಸನ್ಮಾನಿಸಲಾಯಿತು.
ಕೇವಲ ಗೌರವ ಧನದಲ್ಲಿಯೇ ಸಂತೃಪ್ತಿಪಟ್ಟು, ಯಾವುದೇ ಸರಕಾರಿ ಶಾಲೆಗೆ ಸರಿಸಾಟಿಯಾಗಿ ಅತ್ಯುತ್ತಮ ರೀತಿಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ನೆರವೇರಿಸಿದ್ದರು.
ಈ ಸಂದರ್ಭ ಮುಖ್ಯ ಅತಿಥಿಗಳಾದ ದಾಮೋದರ ಶರ್ಮಾ ಬಾರ್ಕೂರು, ರೆ.ಫಾ. ರೋಶನ್ ಡಿಸೋಜ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ಕೆ.ಆರ್.ಪಾಟ್ಕರ್, ಜಯರಾಮ ಪ್ರಭು, ಶಶಿಧರ ವಾಗ್ಲೆ, ರಾಮದಾಸ್ ಪ್ರಭು,ಉಮೇಶ ಪ್ರಭು ಪಾಲಮೆ, ಶಂಕರ ಶೆಟ್ಟಿ ಮಾನಿಪಾಡಿ, ದಿನೇಶ್ ದೇವಾಡಿಗ, ಅನಂತರಾಮ ವಾಗ್ಲೆ ಮತ್ತಿತರರು ಉಪಸ್ಥಿತರಿದ್ದರು.
